ಕರ್ನಾಟಕ ಸರಕಾರದಲ್ಲಿ ಸುನಿಲ್ ಕುಮಾರ್ “ಪವರ್” ಮಿನಿಸ್ಟರ್

ಹಂತ ಹಂತವಾಗಿ ಮೇಲೆದ್ದು ಬಂದ ಸುನಿಲ್ ಕುಮಾರ್ ತೆಕ್ಕೆಗೆ ಇಂಧನ, ಕನ್ನಡ ಮತ್ತು ಸಂಸ್ಕೃ ತಿ ಇಲಾಖೆಯ ಮಹತ್ತರ ಜವಾಬ್ದರಿ ನೀಡಿದೆ ಬೊಮ್ಮಾಯಿ ಸರಕಾರ.  
 

ಚಿಕ್ಕಮಗಳೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಕಲಾ ಪದವಿ ಪಡೆದು ಪತ್ರಕರ್ತರಾಗಿ ಸೇವೆ ಸಲ್ಲಿಸಿ ತದನಂತರ ಸಂಪೂರ್ಣವಾಗಿ ಸಮಾಜ ಸೇವೆಗಾಗಿ ತನ್ನನ್ನು ತಾನು ಸಮ ರ್ಪಣೆ. ಶಾಲಾ ಶಿಕ್ಷಣದ ಜೊತೆಜೊತೆಯಲ್ಲೇ ಅಪ್ಪಟ ದೇಶ ಪ್ರೇಮಿಯಾಗಿ ರೂಪುಗೊಳ್ಳುವಿಕೆ ರಾಷ್ಟ್ರೀಯ ವಾದಿ ಚಿಂತನೆಯ ಒಲವು ಹೊಂದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್‍ನ ಕಡೆಗೆ ಆಕರ್ಷಿತರಾಗಿ ಸಂಘದ ಗರಡಿಯಲ್ಲಿ ಶಿಸ್ತಿನ ಶಿಪಾಯಿ ಯಾಗಿ ವ್ಯಕ್ತಿತ್ವ ನಿರ್ಮಾಣ.

ಬಾಲ್ಯದಿಂದಲೇ ವಾಕ್ಚಾತುರ್ಯವನ್ನು ಬೆಳೆಸಿಕೊಂಡು ವಿವಿಧ ರೀತಿಯ ಭಾಷಣ, ಚರ್ಚೆ, ಭಾವಗೀತೆ, ದೇಶಪ್ರೇಮದ ಗೀತೆಗಳಲ್ಲಿ ಮುಂಚೂಣಿಯ ಸಾಧನೆ. ಹಿತ್ತಲ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲೇ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗುವ ಮೂಲಕ ‘ಬೆಳೆಯುವ ಸಿರಿ ಮೊಳಕೆ’ಯಲ್ಲೇ ಎಂಬ ಮಾತನ್ನು ಅನ್ವರ್ಧಗೊಳಿಸಿದ ನಾಯಕತ್ವ ಗುಣ.

ಹಿಂದುತ್ವದ ಸಿದ್ದಾಂತವನ್ನು ಮೈಗೂಡಿಸಿಕೊಂಡು ಬಜರಂಗದಳದ ಮೂಲಕ ಹಿಂದೂಪರ ಹೋರಾಟ ಅದಕ್ಕೆ ಕೈಗನ್ನಡಿಯೋ ಎಂಬಂತೆ 1997ರಲ್ಲಿ ರಾಷ್ಟ್ರದ ಗಮನ ಸೆಳೆದ ದತ್ತಪೀಠದ ಹೋರಾಟವನ್ನು ಒಂದು ವೃತದಂತೆ ಕೈಗೊಂಡ ರೀತಿ ಲಕ್ಷಾಂತರ ಜನರ ಮೆಚ್ಚುಗೆಯನ್ನು ಗಳಿಸಿತು. ಸಹಸ್ರ ಸಹಸ್ರ ಹಿಂದುಗಳನ್ನು ಒಟ್ಟುಗೂಡಿಸಿದರಲ್ಲದೆ ಅವರನ್ನು ದತ್ತಮಾಲೆಯನ್ನು ಧರಿಸಿ ಒಂದು ದೀಕ್ಷೆಯನ್ನು ಪಡೆಯುವಂತೆ ಪ್ರೇರೇಪಿಸಿತು. 

ಮುಂದೆ ಬಜರಂಗದಳ ಚಿಕ್ಕಮಗಳೂರು ಜಿಲ್ಲಾ ಸಂಚಾಲಕರಾಗಿ, ಕರ್ನಾಟಕ ರಾಜ್ಯ ಸಂಚಾಲಕರಾಗಿ ಸಂಘಟನೆಯನ್ನು ಬಲಪಡಿಸಿದ್ದು ಈಗ ಇತಿಹಾಸ. ನಿರಂತರ ಹೋರಾಟ, ಕಠಿಣ ಪರಿಶ್ರಮ, ನ್ಯಾಯ ನಿಷ್ಠುರತೆ , ಜನಪರ ಕಾಳಜಿ, ದೇಶಪ್ರೇಮ, ಅಂದಿನ ಸರಕಾರಗಳ ಸುಳ್ಳು ಪ್ರಕರಣಗಳ ಯಾವುದೇ ಬೆದರಿಕೆಗಳಿಗೆ ಜಗ್ಗದೆ, ಎದೆಗುಂದದೆ ಧೈರ್ಯವಾಗಿ ಎದುರಿಸಿದ್ದರಿಂದಲೇ ಮುಂದೆ ಅವಕಾಶಗಳು ಅರಸುತ್ತಾ ಬಂದುವು.

ಪರಿಣಾಮವಾಗಿ 2004ರಲ್ಲಿ ಭಾರತೀಯ ಜನತಾ ಪಕ್ಷದ ಪ್ರತಿನಿಧಿಯಾಗಿ ಮೂರು ದಶಕಗಳ ಹಿನ್ನೆಲೆಯನ್ನು ಹೊಂದಿದ್ದು ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಕಾರ್ಕಳದಲ್ಲಿ ಭಾರೀ ಬಹುಮತದೊಂದಿಗೆ ವಿಜಯ ಪತಾಕೆಯನ್ನು ಹಾರಿಸಿದ್ದು ಒಂದು ಐತಿಹಾಸಿಕ ದಾಖಲೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಶಾಸಕಾರಿ ಆಯ್ಕೆಯಾಗಿ ಬಂದು ಪ್ರಸ್ತುತ ರಾಜ್ಯ ಸಚಿವರ ಸ್ಥಾನಮಾನ ಹೊಂದಿರುವ ಕರ್ನಾಟಕ ಸರಕಾರದ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಆಯ್ಕೆಯಾಗಿದ್ದು ಶ್ರೀ ವಿ.ಸುನಿಲ್ ಕುಮಾರ್ ರವರ ನಾಯಕತ್ವಕ್ಕೆ ಸಾಕ್ಷಿ.

 
 
 
 
 
 
 
 
 
 
 

Leave a Reply