ಶಿವರಾಮ್ ಕಾರ್ಕಡ ಸಂಸ್ಮರಣೆ

2021 ಮೇ 29 ರಂದು ಶಿವರಾಮ್ ಕಾರ್ಕಡ ಇವರು ನಿಧನ ಹೊಂದಿದ್ದು ಇವತ್ತಿಗೆ ಒಂದು ವರ್ಷ ಸಂದಿದೆ. ನಾಟಕ ಯಕ್ಷಗಾನ ಮತ್ತು ಇನ್ನಿತರ ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದ್ದು ಸೇವೆ ಸಲ್ಲಿಸಿದವರು. ಇವರ ಅಕಾಲಿಕ ಮರಣ ಸರ್ವರಿಗೂ ಸಹಿಸಲಾಸಾಧ್ಯವಾದ ವಿಷಯ ಎಂದು ಬಳಗದ ಅಧ್ಯಕ್ಷ ಶ್ರೀ ಕೆ. ತಾರಾನಾಥ ಹೊಳ್ಳ ಸಂಸ್ಮರಣಾ ಸಭೆಯಲ್ಲಿ ತಿಳಿಸಿದರು.ಕಾರ್ಕಡ ಖಾಸಗಿ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸಂಸ್ಮರಣೆ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಸಾಲಿಗ್ರಾಮ ಪ. ಪಂಚಾಯ್ತು ಸದಸ್ಯ ಶ್ರೀ ಸಂಜೀವ ದೇವಾಡಿಗ, ಶ್ರೀ ಅಚ್ಚುತಪೂಜಾರಿ,ಶ್ರೀ ಕೆ. ವಿಶ್ವೇಶ್ವರ ಹೊಳ್ಳ,ಶಾಲಾ ಮುಖ್ಯ ಶಿಕ್ಷಕ ಎನ್. ಪ್ರಭಾಕರ ಕಾಮತ್,ಹಾಗೂ ಗೆಳೆಯರ ಬಳಗದ ಅಧ್ಯಕ್ಷ ಶ್ರೀ ಕೆ. ತಾರನಾಥ ಹೆೊಳ್ಳ ಉಪಸ್ಥಿತರಿದ್ದರು.ವೇದಿಕೆಯಲ್ಲಿದ್ದ ಹಾಗೂ.ಸ್ಥಳೀಯರು ಪುಷ್ಪ ನಮನಗೈದು ಮೃತರ ಆತ್ಮಕ್ಕೆ ಗೌರವ ಸಲ್ಲಿಸಿದರು.ಗೆಳೆಯರ ಬಳಗದ ಸದಸ್ಯರು, ಶಿವರಾಮನ ಮಕ್ಕಳು ,ಕುಟುಂಬಸ್ಥರು, ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು
ರಮೇಶ್ ಮೆಂಡನ್ ನಿರೊಪಿಸಿದರು.

 
 
 
 
 
 
 
 
 
 
 

Leave a Reply