ಬನ್ನಂಜೆ ಬಿಲ್ಲವರ ಸೇವಾಸಂಘಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಭೇಟಿ

ಉಡುಪಿ : ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಶುಕ್ರವಾರ ಬನ್ನಂಜೆ ಬಿಲ್ಲವರ ಸೇವಾ ಸಂಘದ ನಾರಾಯಣಗುರು ಮಂದಿರಕ್ಕೆ ಭೇಟಿ ನೀಡಿದರು. ದೇವಳದ ಪುರೋಹಿತರು ಪೂಜೆ ಮಾಡಿ ಪ್ರಸಾದ ನೀಡಿದರು ಸಂಘದ ಅಧ್ಯಕ್ಷ ಆನಂದ ಪೂಜಾರಿ ಕಿದಿಯೂರು ಕ್ಷೇತ್ರದ ವತಿಯಿಂದ ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಿದರು.

ಶಾಸಕ ರಘುಪತಿ ಭಟ್, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಮಟ್ಟಾರು ರತ್ನಾಕರ ಹೆಗ್ಡೆ, ಉದಯ್ ಕುಮಾರ್ ಶೆಟ್ಟಿ ಮತ್ತು ಉಡುಪಿ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ರಿಗೆ ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಲಯಿತು.

ಬಿಲ್ಲವ ಸಂಘದ ಅಧ್ಯಕ್ಷ ಸೂರ್ಯಪ್ರಕಾಶ್, ಎ.ಕೆ.ಶಂಕರ್, ಜನಾರ್ಧನ ಸಿ ಕರ್ಕೇರ, ಶೇಖರ ಪೂಜಾರಿ ಕಲ್ಮಾಡಿ, ನರನ ಜತ್ತನ್, ಮಧುಸೂಧನ್, ಶಶಿಧರ ಎಂ ಅಮೀನ್, ಉದಯ ಪೂಜಾರಿ, ರಾಘವೇಂದ್ರ ಅಮೀನ್ , ಅಶೋಕ್ ಪೂಜಾರಿ, ರೇಖಾ, ಬನ್ನಂಜೆ ಬಾಬು ಅಮೀನ್, ಶಿವರಾಮ್ ಬನ್ನಂಜೆ, ಬಿ.ಬಿ. ಪೂಜಾರಿ, ರಾಮಚಂದ್ರ ಕಿದಿಯೂರು, ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ ಹಾಗೂ ಪದಾಧಿಕಾರಿಗಳು ಓಬು ಪೂಜಾರಿ, ದಯಾನಂದ ಬನ್ನಂಜೆ, ಸುಂದರ ಪೂಜಾರಿ, ಚೆಲುವರಾಜ್, ದಾಮೋದರ ಕಲ್ಮಾಡಿ, ಎಸ್.ಟಿ ಕುಂದರ್ ಮಹೇಶ್ ಕಲ್ಮಾಡಿ, ಮೊದಲಾದವರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಮಾಧವ ಬನ್ನಂಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply