ಮಂಗಳೂರು ಪ್ರಧಾನ ಅಂಚೆ ಕಛೇರಿಗೆ  ವಿಭಾಗೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳು

2022-2023 ನೇ  ಸಾಲಿನಲ್ಲಿ  ಮಂಗಳೂರು  ಅಂಚೆ  ವಿಭಾಗೀಯ  ಮಟ್ಟದಲ್ಲಿ  ಅತ್ಯುತ್ತಮ  ಸಾಧನೆ  ಮಾಡಿದ  ಅಂಚೆ  ಕಛೇರಿಗಳಿಗೆ  ಪ್ರಶಸ್ತಿಯನ್ನು  ನೀಡಲಾಗಿದ್ದು,  ಪಾಂಡೇಶ್ವರದಲ್ಲಿರುವ  ಮಂಗಳೂರು  ಪ್ರಧಾನ ಅಂಚೆ  ಕಛೇರಿಗೆ  ಐದು  ಪ್ರಶಸ್ತಿಗಳು  ಬಂದಿವೆ.

ಆಧಾರ್  ನೋಂದಣಿ  ಮತ್ತು  ತಿದ್ದುಪಡಿಯಲ್ಲಿ  ದ್ವಿತೀಯ,  ಅಂಚೆ  ಉಳಿತಾಯ  ಯೋಜನೆಗಳಲ್ಲಿ  ದ್ವಿತೀಯ,  ಸುಕನ್ಯಾ  ಸಮೃದ್ಧಿಯಲ್ಲಿ  ಪ್ರಥಮ,  ಅಟಲ್  ಪೆನ್ ಶನ್   ಯೋಜನೆಯಲ್ಲಿ  ಪ್ರಥಮ  ಹಾಗೂ  ಮಹಿಳಾ  ಸಮ್ಮಾನ್  ಯೋಜನೆಯಲ್ಲಿ  ದ್ವಿತೀಯ  ಸ್ಥಾನವನ್ನು  ಪಡೆದು  ಒಟ್ಟು  5  ಪ್ರಶಸ್ತಿಗಳನ್ನು ಮಂಗಳೂರು ಪ್ರಧಾನ ಅಂಚೆ ಕಚೇರಿ  ತನ್ನದಾಗಿಸಿಕೊಂಡಿದೆ.

ವಿಭಾಗೀಯ  ಹಿರಿಯ  ಅಧೀಕ್ಷಕರಾದ  ಶ್ರೀ  ಸುಧಾಕರ  ಮಲ್ಯ  ಹಾಗೂ  ಮುಖ್ಯ  ಅತಿಥಿಗಳಾದ  ನಿವೃತ್ತ  ಹಿರಿಯ  ಅಂಚೆ  ಅಧೀಕ್ಷಕ  ಶ್ರೀ  ಗೋಪಾಲ್ ರವರು  ಈ  ಪ್ರಶಸ್ತಿಯನ್ನು  ಪ್ರಧಾನ   ಅಂಚೆ  ಕಛೇರಿಯ  ವರಿಷ್ಠ  ಅಂಚೆ  ಪಾಲಕರದ  ಶ್ರೀ  ಶ್ರೀನಾಥ್ ಬಸ್ರೂರು  ಅವರಿಗೆ  ನೀಡಿದರು.  ಉಪ  ಅಂಚೆ  ಅಧೀಕ್ಷರಾದ   ಶ್ರೀ  ದಿನೇಶ್  ಪಿ. ಯವರು    ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply