ಈ ಬಾರಿಯ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಕಣ ಭಾರೀ ರಂಗೇರಿದೆ. ಅದರಲ್ಲೂ ಪಶ್ಚಿಮ ಬಂಗಾಳ ಹೊರತುಪಡಿಸಿದರೆ ತಮಿಳುನಾಡು ವಿಧಾನಸಭ ಚುನಾವಣೆ ಬಹಳ ಕೂತುಹಲ ಮೂಡಿಸಿದೆ. ತಮಿಳುನಾಡಿನ ಅರುವಕುರುಚ್ಚಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕೆ. ಅಣ್ಣಾಮಲೈ ಆಯ್ಕೆಯಾಗಿದ್ದು, ಚುನಾವಣೆಯಲ್ಲಿ ಅಣ್ಣಾಮಲೈ ಹವಾ ಬಿರುಸಾಗಿರಬಹುದು.
ಖಡಕ್ ಅಧಿಕಾರಿಯಾಗಿ, ಉತ್ತಮ ಸೇವೆ ನೀಡುತ್ತಿರುವಾಗ ಪೋಲಿಸ್ ಇಲಾಖೆ ತೋರೆದು ಬಿಜೆಪಿ ಸೇರಿದ ಕರ್ನಾಟಕದ ಸಿಂಗಂ ಗೆ ತಮಿಳುನಾಡಿನ ಜನತೆ ಕೈಹಿಡಿದು ಗೆಲ್ಲಿಸತ್ತಾರೊ, ಇಲ್ಲವೋ ಕಾದುನೋಡಬೇಕಿದೆ.