ಟೀಮ್ ಭವಾಬ್ದಿ ಪಡುಕರೆ ವರ್ಷೋತ್ಸವ ಸಂಭ್ರಮದಲ್ಲಿ ಪಟ್ಲ ಸತೀಶ್ ಶೆಟ್ಟ ಸಾರಥ್ಯದಲ್ಲಿ ಯಕ್ಷಗಾನ

ಕೋಟ : ಪ್ರತಿವರ್ಷ ಕೋಟತಟ್ಟು ಪಡುಕರೆಯಲ್ಲಿ ಟೀಮ್ ಭವಾಬ್ದಿ ಪಡುಕರೆ ಇವರ ಆಶ್ರಯದಲ್ಲಿ ನಡೆಯುವ ಸಾಂಸ್ಕೃತಿಕ ವೈಭವ ಸಂಭ್ರಮದಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಈ ಬಾರಿ ಮಾ.8 ರಂದು ಸಂಜೆ 6ರಿಂದ ಯಕ್ಷಗಾನ , ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ದಿನೇಶ್ ಗಾಣಿಗರನ್ನು ಹಾಗೂ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು ಅಲ್ಲದೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ನಾಗವೃಜ ಪಾವಂಜೆ ಮೇಳದವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟ ಇವರ ಸಾರಥ್ಯದಲ್ಲಿ ಯಕ್ಷಗಾನ ಬಯಲಾಟ
“ಶ್ರೀ ದೇವಿ ಮಹಾತ್ಮ”ಎಂಬ ಪೌರಾಣಿಕ ಕಥಾಭಾಗವನ್ನು ಕಾಲಮಿತಿ ಯಕ್ಷಗಾನ ಕೋಟತಟ್ಟು ಗ್ರಾಮದ ಪಡುಕೆರೆ 5 ಸಂಟ್ಸ್ ಸರ್ಕಲ್, (ನೂತನ್ ಸ್ಟೋರ್ ಬಳಿ ) ನಡೆಯಲಿರುವುದು ಭವಾಬ್ದಿ ಪಡುಕರೆ ಇದರ ರವೀಂದ್ರ ತಿಂಗಳಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply