ಆದಾರ್, ಪ್ಯಾನ್ ಗಳು ಲಿಂಕ್ ಆಗುವಾಗ ಕಣ್ಣೀರು ತುಂಬಿದ ಬಡವನ ಕಣ್ಣುಗಳು ಬ್ಲಿoಕ್ ಆಗುತಿದ್ದವು- ಡಾ. ಶಶಿಕಿರಣ್ ಶೆಟ್ಟಿ, ಉಡುಪಿ

ಅದು ಡಿಜಿಟಲ್ ಸೈಬರ್ ಕೇಂದ್ರ ಕುಟುಂಬದ ಒಟ್ಟು 7(ತನ್ನದ್ದು, ಹೆಂಡತಿದ್ದು,ಅಪ್ಪ, ಅಮ್ಮ, ಹೆಂಡತಿಯ, ತಂದೆ ತಾಯಿ ತಂಗಿಯದ್ದು) ಮಂದಿಯ ಆಧಾರ್ ಹಾಗೂ ಪ್ಯಾನ್ ಲಿಂಕ್ ಮಾಡಬೇಕಿತ್ತು ಬಾಬಣ್ಣ ನಿಗೆ(ಹೆಸರು ಬದಲಿಸಿದೆ). ಎಲ್ಲಾ ದಾಖಲೆ ಕೊಟ್ಟ ಒಂದೊಂದೇ ಪ್ಯಾನ್ ಆದಾರ್ ಲಿಂಕ್ ಆಗುತಿತ್ತು ಒಟ್ಟು 7,000 ಕೇಳಿದಾಗ ಕಿಸೆಯಿಂದ ತೆಗೆದ, ಕಿಸೆ ಯಿಂದ ಪಿಂಕ್ ಬಣ್ಣದ ಚೇಟಿ ಯೊಂದು ಬಿತ್ತು, ಸೈಬರ್ ಅಂಗಡಿಯವ ಓದಿದ ಹೆಂಡತಿಯ ಮಾಂಗಲ್ಯ ಸರ ವನ್ನು 10,000 ಕ್ಕೆ ಆಡವು ಇಟ್ಟಿದ್ದ ಬ್ಯಾಂಕ್ ಅಲ್ಲಿ ಅಂಗಡಿಯಾತನಿಗೂ ಬೇಸರವಾಗಿತ್ತು “ಮಾಂಗಲ್ಯ ಅಡವಿಟ್ಟು ಹಣ ತಂದ್ಯಾ?” ಕೇಳಿದಾಗ. 
 
ಮುಚ್ಚಿಟ್ಟಿದ್ದ ಒಳಗಿನ ವಿಷಯ ತಿಳಿದ ದುಃಖ ಬಾಬಣ್ಣನ ಮುಖದಲ್ಲಿತ್ತು,” ಹೌದು ಸ್ವಾಮಿ ಏನು ಮಾಡುವುದು ಹೇಳಿ ಈ ಉರಿಬಿಸಿಲಲ್ಲೂ ಬೆಳಿಗ್ಗೆ ಇಂದ ಸಂಜೆ ದುಡಿಯುವ ದಿನಕೊಲಿ ಕಾರ್ಮಿಕರು ನಾವು, ಕೆಲವು ದಿನ ಕೆಲಸ ಇದ್ದರೆ ಕೆಲವು ದಿನ ಇರುವುದಿಲ್ಲ ಸಂಜೆ ತನಕ ದುಡಿದರೆ 800 ರೂ ಸಿಗುತ್ತದೆ. ಮನೆ ಖರ್ಚು, ಅಕ್ಕಿ, ಬೇಳೆ, ಮಕ್ಕಳ ಶಾಲೆ, ಹಾಲು, ತರಕಾರಿ, ಸಾಲದ ಕಂತು ತುಂಬು ವಾಗ ತಿಂಗಳ ಕೊನೆಯಲ್ಲಿ ಏನೇನೂ ಉಳಿಯುದಿಲ್ಲ. 
 
ಮತ್ತೆ 7000 ಎಲ್ಲಿಂದ ತರೋದು ಸ್ವಾಮಿ, ಇವತ್ತು ಕೆಲಸ ಬಿಟ್ಟು ಬಂದೆ ಅಲ್ಲೂ 800 ರೂ ಹೋಯ್ತು, ಒಟ್ಟು 7 ಜನ ಬಸ್ ಚಾರ್ಜ್ ಬೇರೆ, ಮನೇಲಿ ಅಡವು ಇಡೋಕೆ ಕರಿಮಣಿ ಮಾತ್ರ ಉಳಿದಿತ್ತು. ಉಳಿದಿದ್ದೆಲ್ಲ ಕೊರೋನ ಸಮಯದಲ್ಲಿ ಇಟ್ಟಾಗಿದೆ” ಎನ್ನುವಾಗ ಅಲ್ಲೇ ಇದ್ದ ಆತನ ಹೆಂಡತಿ ಸೆರಗು ಹೊದ್ದು ನಿಲ್ಲುತ್ತಾಳೆ.
ಅರಶಿಣದ ಕೊಂಬಿಗೆ ದಾರ ಕಟ್ಟಿದ ಕರಿಮಣಿ ತೋರಬಾರದು ಎಂಬುದು ಅವಳ ಉದ್ದೇಶವಾಗಿತ್ತು, ಅಲ್ಲ ಸ್ವಾಮಿ ಇವತ್ತಾಗಿದ್ದಕ್ಕೆ ಬಚಾವ್ ಆಯ್ತು ನೋಡಿ ಇನ್ನು ಮುಂದಿನ ತಿಂಗಳಾಗಿದ್ದರೆ..7 ಜನಕ್ಕೆ ತಲಾ 10,000 ದಂತೆ 70,000 ಕ್ಕೆ ನಮ್ಮ ಮನೆಯ ಆರ್ ಟಿ. ಸಿ ಇಡಬೇಕಿತ್ತು ನೋಡಿ ಎನ್ನುವಾಗ ಬಾಬಣ್ಣ ನ ಕಣ್ಣಲ್ಲಿ ಅವನಿಗರಿವಾಗದಂತೆ ಕಣ್ಣೀರ ಹನಿಯೊಂದು ಮಿಂಚಿ ಮಾಯವಾಗಿತ್ತು. ಅಲ್ಲಿ ಆದಾರ್, ಪ್ಯಾನ್ ಗಳು ಲಿಂಕ್ ಆಗುವಾಗ ಕಣ್ಣೀರು ತುಂಬಿದ ಬಡವನ ಕಣ್ಣುಗಳು ಬ್ಲಿoಕ್ ಆಗುತಿದ್ದವು.
ನಾನೊಬ್ಬ ಭಕ್ತನೂ ಅಲ್ಲ ಗುಲಾಮನೂ ಅಲ್ಲ ದೇಶದ ಪ್ರಜ್ಞಾವಂತ ಪ್ರಜೆ, ಮತದಾರ ಅಷ್ಟೇ,  ಪ್ರಶ್ನಿಸುವುದು ಸಂವಿಧಾನ ನನಗೆ ಕೊಟ್ಟ ಹಕ್ಕು, ಇಲ್ಲಿ ವಿಷಯ ಸರಳವಾಗಿದೆ ಪಾನ್ ಆದಾರ್ ಲಿಂಕ್ ಮಾಡುವುದು ಅತೀ ಅವಶ್ಯ, ಓಕೆ ಒಪ್ಪುವ, ಹಾಗೆಂದು ಬಡ ಜನರನ್ನು ಬಲಿ ಪಶು ಮಾಡುವುದನ್ನು ಒಪ್ಪಲಾಗದು, ಬನ್ನಿ ಬಿಪಿಲ್ ಕಾರ್ಡ್ ದಾರರನ್ನು ಈ ರೀತಿಯ ಸುಲಿಗೆ ಇಂದ ರಕ್ಷಿಸೋಣ. ನೆನಪಿರಲಿ ಬಡವನ ಕಣ್ಣಲ್ಲಿ ಕಣ್ಣೀರಿಗೆ ನಿನ್ನ ನೀತಿ ನಿಯಮಗಳು ಕಾರಣವಾದರೆ.  ಆ ಕಣ್ಣೀರು ನಿಮಗೆ ಶಾಪ ವಾಗಬಲ್ಲುದು. 10,000,1000  ವಸೂಲಾತಿ ತಕ್ಷಣ ನಿಲ್ಲಿಸಿ.. 
 
 
 
 
 
 
 
 
 
 
 

Leave a Reply