ಪುಸ್ತಕ ವಿತರಣೆಯ ಸುವರ್ಣ ಮಹೋತ್ಸವ

ಪದ್ಮಶಾಲಿ ತರುಣ ವೃಂದ ಶ್ರೀ ವೀರಭದ್ರ ದೇವಸ್ಥಾನ ಕಿನ್ನಿಮುಲ್ಕಿ ಇದರ ವತಿಯಿಂದ ನೀಡಿಕೊಂಡು ಬರುತ್ತಿರುವ ಪುಸ್ತಕ ವಿತರಣೆಯ ಸುವರ್ಣ ಮಹೋತ್ಸವವು ಕಿನ್ನಿಮುಲ್ಕಿ ಶ್ರೀ ವೀರಭದ್ರ ಕಲಾಭವನದಲ್ಲಿ ಜರಗಿತು.

ಸಮಾರಂಭದ ಉದ್ಘಾಟನೆಯನ್ನು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಪ್ರಭಾಶಂಕರ ಪದ್ಮಶಾಲಿಯವರು ನೆರವೇರಿಸಿದರು ಸಭಾಧ್ಯಕ್ಷತೆಯನ್ನು ಪದ್ಮಶಾಲಿ ತರುಣ ವೃಂದದ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾವಂದನ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಪದ್ಮಶಾಲಿ ಸಮಾಜ ಸೇವಾ ಕೂಟ ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀಮತಿ ಭಾನುಮತಿ ಡಿ. ಶೆಟ್ಟಿಗಾರ್, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಮಂಗಳೂರು ಇದರ ಅಧ್ಯಕ್ಷರಾದ ಎಮ್. ಜಯರಾಮ್ ಮಂಗಳೂರು, ಕಿನ್ನಿಮುಲ್ಕಿ ಶ್ರೀ ವೀರಭದ್ರ ದೇವಸ್ಥಾನದ ಪ್ರಧಾನ ಅರ್ಚಕರಾದ ವಾದಿರಾಜ್ ಭಟ್, ಏಸ್ ಟೆಕ್ನೋಕ್ರಾಟ್ಸ್ ಪ್ರೈವೇಟ್ ಲಿಮಿಟೆಡ್ ಇದರ ಡೈರೆಕ್ಟರಾದ ಭಗವಾನ್ ದಾಸ್, ದಕ್ಷಿ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ) ಉಡುಪಿ ಇದರ ಮಾಜಿ ಕಾರ್ಯದರ್ಶಿ ಸಂತೋಷ್ ಸಗ್ರಿ, ಸೀನಿಯರ್ ಅಸೋಸಿಯೇಟ್ ಇನ್ ಬೋಸ್ಟನ್‌ ಕನ್ಸಲ್ಟಿಂಗ್ ಗ್ರೂಪ್ ಇದರ ಕು| ತನ್ವಿ ಶೆಟ್ಟಿಗಾರ್ ಮತ್ತು ಪದ್ಮಶಾಲಿ ತರುಣ ವೃಂದದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಶೆಟ್ಟಿಗಾರ್ ಕರಂದಾಡಿ ಭಾಗವಹಿಸಿದ್ದರು.

ಈ ಸಂಧರ್ಭದಲ್ಲಿ ಪುಸ್ತಕ ವಿತರಣೆಯನ್ನು ಆರಂಬಿಸಿದ ಹಿರಿಯರಾದ ಶ್ರೀ ಕೆ ಮಾಧವ ಶೆಟ್ಟಿಗಾರ್ ಬೈಲೂರು, ಶ್ರೀ ಸದಾನಂದ ಶೆಟ್ಟಿಗಾರ್ ವೇದವ್ಯಾಸ ನಗರ, ಮಹೇಂದ್ರ ಶೆಟ್ಟಿಗಾರ್ ದೊಡ್ಡಣಗುಡ್ಡೆ, ಶ್ರೀ ಶ್ರೀಧರ್ ಜಿ. ಶೆಟ್ಟಿಗಾರ್ ಪೆರಂಪಳ್ಳಿ, ಶ್ರೀ ಕೆ ರಾಮಚಂದ್ರ ಶೆಟ್ಟಿಗಾರ್ ದೊಡ್ಡಣಗುಡ್ಡೆ ಮತ್ತು ಶ್ರೀ ಕೆ ರವೀಂದ್ರ ಶೆಟ್ಟಿಗಾರ್ ಕೆಳ ಆತ್ರಾಡಿ ಇವರನ್ನು ಸನ್ಮಾನಿಸಲಾಯಿತು….
ಪುಸ್ತಕ ವಿತರಣೆಯ ಈ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ವಿಧ್ಯಾರ್ಥಿಗಳು ಪುಸ್ತಕ ಪಡಕೊಂಡರು, ಜೇಸಿಐ ನ ರಾಷ್ಟ್ರೀಯ ತರಬೇತುದಾರರಾದ ಡಾ. ಶಿವಪ್ರಸಾದ್ ಶೆಟ್ಟಿಗಾರ್ ರವರು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ವಿವಿಧ ಸ್ಪರ್ಧೆಗಳನ್ನು ನೆರವರೇಸಿ, ಸ್ಪೂರ್ತಿದಾಯಕ ಮಾತುಗಳನ್ನಾಡಿದರು

ಈ ಕಾರ್ಯಕ್ರಮವನ್ನು ಶಿವಪ್ರಸಾದ್ ಶೆಟ್ಟಿಗಾರ್ ಕುಕ್ಕಿಕಟ್ಟೆ ಮತ್ತು ಮಮತಾರೂಪೇಶ್ ಕಾರ್ಯಕ್ರಮ ನಿರೂಪಿಸಿ ದೀಪಕ್ ಕಿನ್ನಿಮುಲ್ಕಿ ಸ್ವಾಗತಿಸಿ, ಅರವಿಂದ ಪದ್ಮಶಾಲಿ ಧನ್ಯವಾದವಿತ್ತರು.

 
 
 
 
 
 
 
 
 
 
 

Leave a Reply