ಪಾಂಡೇಶ್ವರದ ಬೆಂಕಿಗಾಹುತಿ ಪಡೆದ ಮನೆಗೆ ನಿಸ್ವಾರ್ಥ ಸೇವಾ ಟ್ರಸ್ಟ್ ಸಹಾಯಹಸ್ತ

ಕೋಟ: ಇತ್ತೀಚಿಗೆ ಪಾಂಡೇಶ್ವರ ಪರಿಸರದ ಬೆಂಕಿಗಾಹುತಿ ಪಡೆದ ಮನೆಗೆ ನಿಸ್ವಾರ್ಥ ಸೇವಾ ಟ್ರಸ್ಟ್ ಸಹಾಯಹಸ್ತ ನೀಡಿ ಮಾನವಿಯತೆ ಮೆರೆದಿದೆ.
ಜ್ಯೋತಿ ರಮೇಶ್ ಸೇರಿದ ಬಡ ಕುಟುಂಬಕ್ಕೆ ಕೋಟದ ನಿಸ್ವಾರ್ಥ ಸೇವಾ ಟ್ರಸ್ಟ್ ತಿಂಗಳ ಯೋಜನೆಯಂತೆ 8 ಸಾವಿರ ಆರ್ಥಿಕ ಸಹಾಯಹಸ್ತ ಹಾಗೂ ಸುಮಾರು 10ಸಾವಿರ ಮೌಲ್ಯದ ದಿನಸಿ ಸಾಮಾನುಗಳನ್ನು ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಮೂಲಕ‌ ಹಸ್ತಾಂತರಿಸಿತು.
ಕಳೆದ ಹಲವಾರು ವರ್ಷಗಳಿಂದ ಉಡುಪಿ ಜಿಲ್ಲೆಯ ಸಾಕಷ್ಟು ಬಡ ಕುಟುಂಬಳಿಗೆ ಆರ್ಥಿಕ ಸಹಾಯ,ದಿನಸಿ ಸಾಮಾನು,ಮನೆ ಕಟ್ಟಿಕೊಡುವ ಯೋಜನೆ,ಅನಾಥಾಶ್ರಮಕ್ಕೆ ಸಹಾಯ,ಅನಾರೋಗ್ಯ ಪೀಡಿತರಿಗೆ ಸಹಾಯ,ಕೋವಿಡ್ ಸಂದರ್ಭದಲ್ಲಿ ಮೆಡಿಸಿನ್,ದಿನಸಿ ಕಿಟ್ ಹೀಗೆ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಈ ಟ್ರಸ್ಟ್ ಮಾಡಿಕೊಂಡು ಬರುತ್ತಿದೆ.ಯುವ ಸಮುದಾಯಕ್ಕೆ ಈ ಯುವಕರ ತಂಡ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಕಾರ್ಯದರ್ಶಿ ಪ್ರದೀಪ್ ಪೂಜಾರಿ, ಟ್ರಸ್ಟ್ ನಿರ್ದೇಶಕರಾದ ಗೋಪಿನಾಥ್ ಕಿಣಿ,ಸೂರ್ಯಕಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply