ಮಂಗಳೂರು : ಗೃಹಪ್ರವೇಶದ ದಿನವೇ ಹೃದಯಾಘಾತಕ್ಕೆ ಮನೆ ಮಾಲೀಕ ಬಲಿ!

ಜೀವನದಲ್ಲಿ ನಾವೊಂದು ಪ್ಲ್ಯಾನ್‌ ಮಾಡಿದರೆ ವಿಧಿ ಇನ್ನೊಂದು ಪ್ಲ್ಯಾನ್‌ ಮಾಡುತ್ತೆ ಎನ್ನುವುದಕ್ಕೆ ಮಂಗಳೂರಿನಲ್ಲಿ ನಡೆದಿರುವ ಘಟನೆಯೇ ಸಾಕ್ಷಿ. ಬಜ್ಪೆಯ ಕರಂಬಾರಿನಲ್ಲಿ ನೂತನ ಗೃಹ ಪ್ರವೇಶದ ಸಮಯದಲ್ಲೇ ಮನೆ ಮಾಲೀಕ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮಧುಕರ್‌ ಎಂಬುವವರೇ ಮೃತ ಹೊಂದಿದ ವ್ಯಕ್ತಿ. ಕಾವೂರಿನಲ್ಲಿ ಅಂಗಡಿಯೊಂದನ್ನು ಹೊಂದಿದ್ದ ಮಧುಕರ್‌ ಅವರು, ಹಲವಾರು ಸಂಘ, ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಮನೆ ಕಟ್ಟಿ ಸಂಭ್ರಮಿಸುತ್ತಿರುವಾಗಲೇ ಬರಸಿಡಿಲಿನಂತೆ ಬಂದೆರಗಿದ ಹೃದಯಾಘಾತವು ಮನೆ ಮಾಲೀಕನ ಜೀವವನ್ನೇ ಕಿತ್ತುಕೊಂಡಿದೆ. ಸ್ನೇಹಿತರು ನೆಂಟರು ಊಟ ಮುಗಿಸಿದ್ದು, ತನ್ನ ಹೊಸ ಮನೆಯ ಊಟ ಕೂಡಾ ಮಾಡಿಲ್ಲ ಮಧುಕರ್‌ ಅವರು. ಎಲ್ಲರ ಜೊತೆ ಮಧುಕರ್‌ ಅವರು ಸಂಭ್ರಮದಿಂದಲೇ ಓಡಾಡುತ್ತಿದ್ದರು. ಇದೀಗ ಹೊಸ ಮನೆಯಲ್ಲಿ ಸೂತಕದ ಛಾಯೆ ಉಂಟಾಗಿದೆ. ಕಾವೂರಿನಲ್ಲಿ ಚಿರಪರಿಚಿತ ವ್ಯಕ್ತಿಯಾಗಿರುವ ಮಧುಕರ್‌ ಅವರ ನಿಧನಕ್ಕೆ ಇಡೀ ಊರೇ ಮೌನವಾಗಿದೆ.

 
 
 
 
 
 
 
 
 
 
 

Leave a Reply