ಹೊಸದಿಲ್ಲಿ: ಹೊಸದಾಗಿ ಮಂಡನೆಯಾದ ನೂತನ ಕೃಷಿ ಕಾಯ್ದೆಯ ವಿರುದ್ಧ ವಿವಾದ ಸೃಷ್ಟಿಸಿದ್ದ 8ಮಂದಿ ಸಂಸದರನ್ನು ಒಂದು ವಾರಗಳ ಕಾಲ ಅಮಾನತು ಮಾಡಲಾಗಿದೆ.ಈ ಬಗ್ಗೆ ತಿಳಿಸಿದ ಸಭಾಧ್ಯಕ್ಷ ಎಮ್. ವೆಂಕಯ್ಯ ನಾಯ್ಡು, ರಾಜ್ಯಸ ಭೆಯ ಕಲಾಪದ ನಡುವೆ ಅಶಿಸ್ತಿನ ವರ್ತನೆ ತೋರಿದ್ದ 8 ಮಂದಿ ಸದಸ್ಯರನ್ನು ಒಂದು ವಾರಗಳ ಕಾಲ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.
ಸಂಸತ್ತು ವ್ಯವಹಾರಗಳ ಸಚಿವ ಮುರಳಿಧರನ್ ರವರು ಅಧಿವೇಶನದ ಉಳಿದ ಅವಧಿಗೆ ಈ ಸದಸ್ಯರನ್ನು ಅಮಾನತು ಗೊಳಿಸುವಂತೆ ನೋಟಿಸ್ ಸಲ್ಲಿಸಿದರು. ಅದರ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.ಕೆ.ಕೆ.ರಾಗೇಶ್, ಡೆರೆಕ್ ಒ’ಬ್ರಿಯೆನ್, ಎಲಾಮಾರಾಮ್ ಕರೀಮ್, ಹುಸೇನ್, ಸಂಜಯ್ ಸಿಂಗ್, ರಾಜೀವ್ ಸತ್ತವ್, ರಿಪುನ್ ಬೋರಾ , ಡೋಲಾ ಸೇನ್ ಮತ್ತು ಸೈಯದ್ ನಜೀರ್ ಅಮಾನತುಗೊಂಡ ಸದಸ್ಯರು ಎಂದು ರಾಜ್ಯಸಭಾ ಅಧ್ಯಕ್ಷ ಎಮ್.ವೆಂಕಯ್ಯ ನಾಯ್ಡು ಸೋಮವಾರ ಮಾಹಿತಿ ನೀಡಿದ್ದಾರೆ.