ದೇಶದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸವನ್ನು ಅಂದಿನ ಕಾಂಗ್ರೆಸ್ ಸರಕಾರ ಮಾಡಿತ್ತು ~ ಸಂಸದೆ ಶೋಭಾ ಕರಂದ್ಲಾಜೆ

ಪ್ರಜಾಪ್ರಭುತ್ವದ ಕಗ್ಗೊಲೆಯಾದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆಮನೆವಾಸದ ಶಿಕ್ಷೆ ಅನುಭವಿಸಿದ ಶ್ರೀಮತಿ ಗಾಯತ್ರಿ ಹನುಮಂತ ರಾವ್ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಸಂಸದೆ ಶೋಭಾ ಕರಂದ್ಲಾಜೆಯವರು ಭೇಟಿಯಾಗಿ ಗೌರವಿಸಿದರು. 
ಉದರದಲ್ಲಿ ತನ್ನ ಮೊದಲನೆಯ ಮಗುವನ್ನು ಹೊತ್ತಿದ್ದ ಶ್ರೀಮತಿ ಗಾಯತ್ರಿ ರಾವ್ ಅವರನ್ನು ತುಂಬು ಗರ್ಭಿಣಿ ಎನ್ನುವ ಪರಿಗಣೆಯನ್ನೂ ನೀಡದೆ ಅಂದಿನ ಇಂದಿರಾ ಗಾಂಧಿ ಸರಕಾರ ಸೆರೆಮನೆಗೆ ತಳ್ಳಿತ್ತು. ಶ್ರೀಮತಿ ಗಾಯತ್ರಿ ರಾವ್ ಅವರು ಸೆರೆಮನೆ ಯಲ್ಲಿಯೇ ತನ್ನ ಮಗುವಿಗೆ ಜನ್ಮ ನೀಡಿದ್ದರು.

ಇಂತಹ ಲಕ್ಷಾಂತರ ಜನರನ್ನು ಅಂದಿನ ಇಂದಿರಾಗಾಂಧಿ ಸರಕಾರ ನಿರ್ದಯವಾಗಿ ಬಂಧಿಸಿ ಜೈಲಿಗಟ್ಟಿದರು, ದೇಶದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸವನ್ನು ಅಂದಿನ ಕಾಂಗ್ರೆಸ್ ಸರಕಾರ ಮಾಡಿತು. ದೇಶ ಕಂಡ ಅತ್ಯಂತ ಕರಾಳ ಸಮಯವಾಗಿತ್ತು ತುರ್ತು ಪರಿಸ್ಥಿತಿಯ ಸಂದರ್ಭ.

 
 
 
 
 
 
 
 
 
 
 

Leave a Reply