ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಚ್ಚಡ’ ಇಲ್ಲಿ ನಡೆದ “ತೆರೆದಮನೆ”, ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ತಮ್ಮ ಶಾಲೆಯ ಗ್ರಂಥಾಲಯಕ್ಕೆ ಕಲಿಕೆಗೆ ಪೂರಕವಾಗುವಂತಹ ಪುಸ್ತಕಗಳನ್ನು ಚೈಲ್ಡ್ ಲೈನ್-1098, ಉಡುಪಿಯ ನಿರ್ದೇಶಕರಾದ ಶ್ರೀಯುತ ರಾಮಚಂದ್ರ ಉಪಾಧ್ಯಾಯ ಹಾಗೂ ಚೈಲ್ಡ್ ಲೈನ್-1098, ಉಡುಪಿಯ ಸದಸ್ಯರು ಶ್ರೀ ವೃಷಕ್ ಮತ್ತು ಶ್ರೀ ಪ್ರಮೋದ್ ಶಾಲೆಗೆ ಭೇಟಿಯನ್ನು ನೀಡಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಉಡುಪಿ ಇವರು ನೀಡಿದ 500 ಪುಸ್ತಕಗಳನ್ನು ಶಾಲೆಗೆ ಹಸ್ತಾಂತರಿಸಿರುತ್ತಾರೆ.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಕುಂತಲಾ ದೇವಿ ಹಾಗೂ ಇತರ ಶಿಕ್ಷಕರು ಮತ್ತು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯವರು ಹಾಜರಿದ್ದರು.