ಮಾನಸಿಕ ಆರೋಗ್ಯದ ಕುರಿತು ಕಾರ್ಯಕ್ರಮ

ದಿನಾಂಕ 14/05/2023 ಭಾನುವಾರದಂದು ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ,ಮುಂಬಾಯಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ- ಕರಾವಳಿ ಇವರ ಆಶ್ರಯದಲ್ಲಿ ಆಯೋಜಿಸಿದ್ದ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಖ್ಯಾತ ಮಾನಸಿಕ ಆರೋಗ್ಯ ತಜ್ಞರಾದ ಡಾ. ಸಿ.ಆರ್. ಚಂದ್ರಶೇಖರ ರವರು “ಮನಸ್ಸಿಗೆ ನೆಮ್ಮದಿ ಸಮಾಧಾನ ಹೇಗೆ?” ನಿಮ್ಮ ಸ್ವಾಭಿಮಾನ ಬೆಳೆಸುವುದು ಹೇಗೆ ಎಂಬ ವಿಷಯ ಕುರಿತು ಮಾತನಾಡಿದರು, ಮನಸ್ಸು ಪ್ರಕ್ಷುಬ್ದವಾಗಲು ಕೀಳರಿಮೆ, ನೆಗೆಟಿವ್ ಆಲೋಚನೆಗಳು , ಒಂಟಿತನ, ಆಸರೆ ಇಲ್ಲದಿರುವುದು ಸಂಭಂದಗಳು ಚೆನ್ನಾಗಿಲ್ಲದಿರುವುದು ಕಾರಣವಾಗುತ್ತದೆ , ಮನಸ್ಸು ಪ್ರಕ್ಷುಬ್ದವಾಗದಿರುವಂತೆ ನೋಡಿಕೊಳ್ಳಲು ಹಿತಮಿತವಾದ ಆಹಾರ ಕ್ರಮ, ಸರಿಯಾದ ನಿದ್ರೆ, ಪರಸ್ಪರ ಪ್ರೀತಿ, ಹಣಕಾಸಿನ ಶಿಸ್ತು , ವ್ಯಾಯಾಮ ಗಳನ್ನು ರೂಡಿಸಿಕೊಂಡರೆ ಮನಸ್ಸನ್ನು ಶಾಂತ ಚಿತ್ತದಿಂದ ಕಪಾಡಿಕೊಳ್ಳ ಬಹುದುದು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕರು, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯ ಅಧ್ಯಕ್ಷರಾದ ಡಾ. ಪಿ.ವಿ. ಭಂಡಾರಿಯವರು, ವಹಿಸಿದರು, ಜಿಲ್ಲಾ ಆಸ್ಪತ್ರೆಯ ಮನೋವೈದ್ಯರಾದ ಡಾ.ವಾಸುದೇವ್, ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ್ದ ದೇವರಮನೆ, ಡಾ. ದೀಪಕ್ ಮಲ್ಯ ಉಪಸ್ಥಿತರಿದ್ದರು,ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜ‌ನ ಪಡೆದರು.

 
 
 
 
 
 
 
 
 
 
 

Leave a Reply