ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ಇದರ ವತಿಯಿಂದ ಆಯೋಜಿಸಿದ್ದ ಸಿಬ್ಬಂದಿ ತರಬೇತಿ ಕಾರ್ಯಗಾರ ವನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.
ಸಮಾರಂಭದಲ್ಲಿ ಬ್ಯಾಂಕಿನ ವೃತ್ತಿಪರ ನಿರ್ದೇಶಕರಾದ ವೃತ್ತಿಪರ ನಿರ್ದೇಶಕದ ಶ್ರೀ ಮಂಜುನಾಥ ಎಸ್ ಕೆ, ಸಂಪನ್ಮೂಲ ವ್ಯಕ್ತಿ ಗಳಾದ ಶ್ರೀ ಪ್ರಕಾಶ್ ಆರ್ ಎಸ್., ಶ್ರೀ ಶಿವಾನಂದ ಕುಲಕರ್ಣಿ, ನಿರ್ದೇಶಕರಾದ ಶ್ರೀ ಶಿವರಾಮ ಕುಂದರ್, ಬ್ಯಾಂಕಿನ ಎ ಜಿ ಎಂ ಶ್ರೀಮತಿ ಶಾರಿಕಾ ಕಿರಣ್ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.