ಎರ್ಮಾಳಿನಲ್ಲಿ “ಲಕ್ಷ್ಮೀಮಾಧವ” ಸಾಂಸ್ಕೃತಿಕ ಕಲಾಕೇಂದ್ರವನ್ನು ನಾರ್ತ್ ಮುಂಬಯಿ ಬಿಜೆಪಿ ಉಪಾಧ್ಯಕ್ಷ ಹರೀಶ ಶೆಟ್ಟಿ ಅವರು ಉದ್ಘಾಟಿಸಿದರು ಹೆಜಮಾಡಿಯ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ , ಹಿರಿಯ ವಿದ್ವಾಂಸ ರಾಮಚಂದ್ರ ಭಟ್, ಉಡುಪಿ ಜಿ.ಪಂ. ಉಪಾಧ್ಯಕ್ಷೆ ಶ್ರೀಮತಿ ಶೀಲಾ ಕೆ.ಶೆಟ್ಟಿ , ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ, ನಿವೃತ್ತ ಉಪನ್ಯಾಸಕ , ಪ್ರವಚನಕಾರ ರಾಮಕೃಷ್ಣ ರಾವ್, ವ್ಯಾಸಮೋಹನ ರಾವ್ ಉಪಸ್ಥಿತರಿದ್ದರು .
ವೈ. ಗಣಪತಿ ಭಟ್ – ಶ್ರೀಮತಿ ಶಶಿಕಲಾ ಜಿ.ಭಟ್ ಅವರ ವೈವಾಹಿಕ ಜೀವನದ ರಜತ ಮಹೋತ್ಸವದ ನೆನಪಿಗಾಗಿ ಅವರ ತಾಯಿ – ತಂದೆಯವರ ಹೆಸರಿನ “ಲಕ್ಷ್ಮೀ – ಮಾಧವ” ನಿರ್ಮಾಣಗೊಂಡು,ಉದ್ಘಾಟನೆಯಾಗಿದೆ. ಗಣಪತಿ ಭಟ್ಟರ ಅಮ್ಮ ಭಾಗೀರಥಿ (ಲಕ್ಷ್ನೀ) ಎಂ.ಭಟ್ , ಸಹೋದರ ಗುರುರಾಜ ಭಟ್ ದಂಪತಿ ಮತ್ತು ಸಹೋದರಿಯರು ಉಪಸ್ಥಿತರಿದ್ದರು.