ಶ್ರೀಕೃಷ್ಣಮಠದಲ್ಲಿ,ವಿಜಯದಶಮಿಯಂದು ಸೋದೆಮಠದ ಹೆಬ್ಬಾಗಿಲಿನಿಂದ ಕದಿರನ್ನು ಚಿನ್ನದ ಪಾಲಕಿಯಲ್ಲಿಟ್ಟು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ತಂದು,ಶ್ರೀಕೃಷ್ಣದೇವರ ಗರ್ಭಗುಡಿಯ ಮೂಡುಬಾಗಿಲಿನಿಂದ ಒಳಗೆತಂದು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಶ್ರೀನಿವಾಸ ಉಪಾದ್ಯಾಯರಿಂದ ಪೂಜೆಗೊಂಡು ಕದಿರನ್ನು ಕಟ್ಟಲಾಯಿತು.ನಂತರ ಬಡಗುಮಾಳಿಗೆಯಲ್ಲಿ ಭಕ್ತಾದಿಗಳಿಗೆ ವಿತರಿಸಲಾಯಿತು.