ಎಸ್.ಕೆ.ಪಿ.ಎ ಮಂಗಳೂರು ವಲಯದಲ್ಲಿ ಕಿಟ್ ವಿತರಣೆ

ಉಡುಪಿ: ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ-ಉಡುಪಿ(SKPA) ಮಂಗಳೂರು ವಲಯದ ಸದಸ್ಯರಿಗೆ ಆಶ್ರಯ ಹಸ್ತ ಟ್ರಸ್ಟ್ ಮತ್ತು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಹಾರ ಧಾನ್ಯದ ಕಿಟ್ ಗಳನ್ನು ಕಾರ್ ಸ್ಟ್ರೀಟ್ ಬಳಿಯಿರುವ ಶ್ರೀನಿವಾಸ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಇಂದು ನೀಡಲಾಯಿತು.

ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ನರೇಶ್ ಶೆಣೈ, ಕಾರ್ಯದರ್ಶಿ ಹನುಮಂತ ಕಾಮತ್, ಸದಸ್ಯ ನರೇಶ್ ಪ್ರಭು, ಸಂತೋಷ್ ಶೆಣೈ, SKPA ಮಂಗಳೂರು ವಲಯಧ್ಯಕ್ಷರಾದ ಮಧು ಮಂಗಳೂರು, ಮಾಜಿ ಜಿಲ್ಲಾ ಸಂಚಾಲಕ ವಿಠ್ಠಲ್ ಚೌಟ, ಮಾಜಿ ಜಿಲ್ಲಾಧ್ಯಕ್ಷರಾದ ಜಗನ್ನಾಥ್ ಶೆಟ್ಟಿ, ದಯಾನಂದ್ ಪಯ್ಯಡೆ, ಮಾಜಿ ಅಧ್ಯಕ್ಷರುಗಳಾದ ರಮೇಶ್ ಕಲಾಶ್ರೀ, ಪದ್ಮನಾಭ ಸುವರ್ಣ,ಗಣೇಶ್ ಶೆಣೈ,ಉಪಾಧ್ಯಕ್ಷ ವಸಂತ್ ರಾವ್, ಕಾರ್ಯ ದರ್ಶಿ ನವೀನ್ ಕೋಡಿಕಲ್,ಖಜಾಂಚಿ ಮುಕೇಶ್ ಶೆಟ್ಟಿ, ಸುಧಾಕರ್ ಶೋಕೇಸ್ ಹಾಗೂ ವಲಯದ ಸದಸ್ಯರು ಉಪಸ್ಥಿತರಿದ್ದರು.ವಲಯ ಸದಸ್ಯೆ ಬಬಿತಾ ಲತೀಶ್ ವಂದಿಸಿದರು.

ಛಾಯಾಗ್ರಾಹಕರ ಕಷ್ಟದ ಸಮಯದಲ್ಲಿ ಆಹಾರ ಕಿಟ್ ಗಳನ್ನು ಒದಗಿಸಿ ಸಹಕರಿಸಿದ ಆಶ್ರಯ ಹಸ್ತ ಟ್ರಸ್ಟ್ -ಬೆಂಗಳೂರು ಮತ್ತು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ -ಮಂಗಳೂರು ಇವರಿಗೆ SKPA ಮಂಗಳೂರು ವಲಯದ ವತಿಯಿಂದ ಧನ್ಯವಾದ ಸಲ್ಲಿಸಿದ್ದಾರೆ.

 
 
 
 
 
 
 
 
 
 
 

Leave a Reply