ಕೊಡವೂರು ಕಲ್ಮತ್ ಮಸೀದಿಯ ಪ್ರಕರಣದಲ್ಲಿ ಒಂದು ಸಮುದಾಯ ವನ್ನು ಮೆಚ್ಚಿಸಲು ಶಾಸಕರು ಇನ್ನೊಂದು ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ~ಅಮೃತ್ ಶೆಣೈ

ಉಡುಪಿ: ಸಾಮಾನ್ಯ ಜನರ ಆರ್.ಟಿ.ಸಿ ಬದಲಾವಣೆಗೆ ಕಂದಾಯ ಇಲಾಖೆ ವರ್ಷಾನುಗಟ್ಟಲೆ ಅಲೆದಾಡಿಸುತ್ತದೆ. ಆದರೆ ಕೊಡವೂರು ಕಲ್ಮತ್ ಮಸೀದಿಯ ಪ್ರಕರಣದಲ್ಲಿ ಒಂದು ಸಮುದಾಯ ವನ್ನು ಮೆಚ್ಚಿಸಲು ಶಾಸಕರು ಇನ್ನೊಂದು ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆಂದು ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಅಭಿಪ್ರಾಯ ಪಟ್ಟಿದ್ದಾರೆ.

ಬಲವಂತವಾಗಿ ಮತ್ತು ತರಾತುರಿಯಲ್ಲಿ ಒಂದು ವರ್ಗದ ಜನರನ್ನು ಮೆಚ್ಚಿಸಲು ಶಾಸಕರು ಆರ್.ಟಿ.ಸಿ ಬದಲಾಯಿಸಿ ಅನ್ಯಾಯವೆಸಗಲಾಗಿದೆ. ಈ ಜಾಗವು ವಕ್ಫ್ ನೋಟಿಫಿಕೇಷನ್ ಮಾಡಿದ್ದು ಬಿಜೆಪಿ ಸರಕಾರ.

ಈ ನೋಟಿಫಿಕೇಷನ್ ಮಾಡುವ ಸಂದರ್ಭದಲ್ಲಿ ಎಲ್ಲ ಕಾನೂನಾತ್ಮಕ ಪ್ರಕ್ರಿಯೆಯನ್ನು ಅನುಸರಿಸ ಲಾಗಿದೆ. ಏಕಾಏಕಿ ಬದಲಾವಣೆ ಮಾಡಿರುವುದು ಖಂಡನೀಯ. ಇದು ಸಮುದಾಯಗಳ ನಡುವೆ ಬಿರುಕು ತರುವ ಪ್ರಯತ್ನವೆಂದು ಹೇಳಿದ್ದಾರೆ.

ಈ ರೀತಿಯ ಅನ್ಯಾಯವನ್ನು ಖಂಡಿತವಾಗಿಯೂ ಪ್ರಜ್ಞಾವಂತ ನಾಗರಿಕರು ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದೆಂದು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply