ಜೂ. 28ರ ನಂತರ ಕಲ್ಯಾಣ ಮಂಟಪಗಳಲ್ಲಿ ಮದುವೆಗೆ ಅವಕಾಶ

ಬೆಂಗಳೂರು: ಕೊರೋನಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಈ ತಿಂಗಳ 28ರ ಬಳಿಕ ಮದುವೆ ಹಾಲ್, ಹೋಟೆಲ್, ರೆಸಾರ್ಟ್, ಕಲ್ಯಾಣ ಮಂಟಪ ಇತ್ಯಾದಿಗಳಲ್ಲಿ ಮದುವೆ ನಡೆಸಲು ಸರಕಾರ ಅನುಮತಿ ನೀಡಿದೆ.ರಾಜ್ಯಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆತಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ಆದರೆ, ಮದುವೆಯಲ್ಲಿ ಭಾಗವಹಿಸುವವರ ಒಟ್ಟು ಸಂಖ್ಯೆ 40 ಮೀರುವಂತಿಲ್ಲ. ಈ ಬಗ್ಗೆ ಸ್ಥಳೀಯಾಡಳಿತ ಸಂಸ್ಥೆ, ತಹಶೀಲ್ದಾರ್ ಮೊದಲಾದವರಿಂದ ವರ್ಗಾಯಿಸಲಾಗದ ಪಾಸ್ ಪಡೆದುಕೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಆದೇಶ ನೀಡಿದ್ದಾರೆದ್ದಾರೆ.

 
 
 
 
 
 
 
 
 
 
 

Leave a Reply