ಕಸಾಪ ಉಡುಪಿ ಜಿಲ್ಲೆಯ ಕಾರ್ಯಕಾರಿ ಸಮಿತಿ ಹಾಗು ಎಲ್ಲ ತಾಲೂಕು ಅಧ್ಯಕ್ಷರಗಳ ಘೋಷಣೆ.  

ಶನಿವಾರದಂದು ಕಿದಿಯೂರು ಹೋಟೆಲ್ ನಲ್ಲಿ ನಡೆದ ಜಿಲ್ಲಾ ಕಸಾಪ ಸಭೆಯಲ್ಲಿ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಶಿಯವರು ಅನುಮೋದಿಸಿ ಕಳುಹಿಸಿಕೊಟ್ಟ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗು ಉಡುಪಿ ಜಿಲ್ಲೆಯ ಎಲ್ಲ ತಾಲೂಕುಗಳ ಅಧ್ಯಕ್ಷರುಗಳ ಪಟ್ಟಿಯನ್ನು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಸಭೆಗೆ ತಿಳಿಸಿದರು. .ಗೌರವ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಗೌರವ ಕೊಶಾಧ್ಯಕ್ಷರು ಮನೋಹರ ಪಿ.

ತಾಲೂಕುವಾರು ಅಧ್ಯಕ್ಷರುಗಳಾಗಿ

ಉಡುಪಿಗೆ ರವಿರಾಜ್ ಹೆಚ್. ಪಿ.
ಕಾಪು -ಪುಂಡಲೀಕ ಮರಾಟೆ
ಹೆಬ್ರಿ -ಶ್ರೀನಿವಾಸ ಭಂಡಾರಿ
ಬೈಂದೂರು -ಡಾ। ರಘು ನಾಯ್ಕ, ಬ್ರಹ್ಮಾವರ -ಜಿ. ರಾಮಚಂದ್ರ  ಐತಾಳ್
ಕಾರ್ಕಳ- ಪ್ರಭಾಕರ್ ಶೆಟ್ಟಿ
ಕುಂದಾಪುರ -ಡಾ|ಉಮೇಶ್ ಪುತ್ರನ್

ಹಾಗು ಜಿಲ್ಲಾ ಕಾರ್ಯಕಾರಿ ಸಮಿತಿಯಲ್ಲಿ ಮಹಿಳಾ ಸಾಹಿತಿ ಪೂರ್ಣಿಮಾ ಜನಾರ್ದನ್, ಡಾ | ಗುಲಾಬಿ ಪೂಜಾರ್ತಿ.  ಪರಿಶಿಷ್ಟ ಜಾತಿ ಪ್ರತಿನಿಧಿ ಸತ್ಯನಾರಾಯಣ ಹಾಗು ಸಂಜೀವ ಪರಿಶಿಷ್ಟ ಪಂಗಡ ಪ್ರತಿನಿಧಿ ಪ್ರಕಾಶ್ ನಾಯ್ಕ,  ಸಂಘಸಂಸ್ಥೆ ಪ್ರತಿನಿಧಿಯಾಗಿ ಬಿ. ಭುವನ ಪ್ರಸಾದ ಹೆಗ್ಡೆ, ಪದನಿಮಿತ್ತ ಸದಸ್ಯರಾಗಿ ಜಿಲ್ಲಾ ವಾರ್ತಧಿಕಾರಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಉಪೇಂದ್ರ ಸೋಮಯಾಜಿ, ಪಾರಂಪಳ್ಳಿ ನರಸಿಂಹ ಐತಾಲ್, ಕಟಿಂಗೇರಿ ದೇವದಾಸ ಹೆಬ್ಬಾರ್  ನರಸಿಂಹ ಮೂರ್ತಿ, ಕೋಚ ನಾವಡ, ಪಿ.ವಿ ಆನಂದ್, ಸುರಾಲು ನಾರಾಯಣ ಮಡಿ, ಜನಾರ್ದನ ಕೊಡವೂರು, ಕುರವತ್ತಿ ಗೌಡ, ಮೋಹನ ಉಡುಪ, ರಾಜು ಎನ್ ಆಚಾರ್ಯ  ಉಪಸ್ಥಿತರಿದ್ದರು.

ಜಿಲ್ಲಾ ವಿಶೇಷ ಆಹ್ವಾನಿತರು, ಇನ್ನಿತರ ಸದಸ್ಯರು ಹಾಗೂ ತಾಲ್ಲೂಕು ಕಾರ್ಯಕಾರಿ ಸಮಿತಿ, ಹೋಬಳಿ ಸಮಿತಿಗಳನ್ನು ರಾಜ್ಯಾಧ್ಯಕ್ಷರ ಅನುಮತಿ ಪಡೆದು ತಿಳಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply