ಉಡುಪಿ: ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರ ಉಪಸ್ಥಿತಿಯಲ್ಲಿ ಹಾಗೂ ನೂತನ ಮಹಿಳಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ಪ್ರೇಮಾ ಲತಾ ಅವರು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.ಪ್ರಧಾನ ಕಾರ್ಯದರ್ಶಿಯಾಗಿ ಮುಕ್ತ ಪ್ರಿಯಾ, ಮಹಿಳಾ ಉಪಾಧ್ಯಕ್ಷೆ ಆಗಿ ಶ್ರೀಮತಿ ಸುರೇಖಾ, ಜೊತೆ ಕಾರ್ಯದರ್ಶಿ ಆಗಿ ಶ್ರೀಮತಿ ಅನುಷಾ, ಕಾರ್ಯದರ್ಶಿಯಾಗಿ ಶ್ರೀಮತಿ ನವೀನ, ಸಲಹೆಗಾರರಾಗಿ ಶ್ರೀಮತಿ ಸುನಂದಾ,ಸಾಂಸ್ಕೃತಿಕ ಅಧ್ಯಕ್ಷರಾಗಿ ಶ್ರೀಮತಿ ಮಮತಾ ಅವರನ್ನು ಆಯ್ಕೆ ಮಾಡಲಾಯಿತು.

ತದ ನಂತರ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆಯ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಯಾದ ರಾಘವೇಂದ್ರ ನಾಯಕ್ ಅವರಿಗೆ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ನೇಮಕ ಪತ್ರ ನೀಡಿದರು.
ಜಿಲ್ಲಾ ಅಧ್ಯಕ್ಷರಾದ ಸುಜಯ್ ಪೂಜಾರಿ ಹಾಗೂ ನೂತನ ಮಹಿಳಾ ಅಧ್ಯಕ್ಷೆ ಶ್ರೀಮತಿ ಪ್ರೇಮಲತಾ ಇವರಿಂದ ಹಿತನುಡಿ,ವೇದಿಕೆಯಲ್ಲಿ ಉಪಸ್ಥಿತರಿದ್ದ ಬ್ರಹ್ಮಾವರ ತಾಲೂಕು ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಅವರು ಹಿತ ನುಡಿಗಳನ್ನಾಡಿದರು.
ಹಾಗೂ ಸಲಹೆಗಾರರಾದ ಶ್ರೀಮತಿ ಸುನಂದಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ ಸದಸ್ಯರಾದ ಗೋಪಾಲ್, ನಾರಾಯಣ ಜತ್ತನ , ಪ್ರಭಾಕರ್ ಹಾಗೂ ಮಹಿಳಾ ಸದಸ್ಯರಾದ ಗೀತಾ ಪಾಂಗಳ,ನಿರ್ಮಲಾ,ಬೋರಮ್ಮ, ಸುಲತಾ,ಉಪಸ್ಥಿತರಿದ್ದರು.ಶ್ರೀಮತಿ ಅನುಶಾ ಧನ್ಯವಾದವಿತ್ತರು.

 
 
 
 
 
 
 
 
 
 
 

Leave a Reply