ಮುಂಬೈ: ತಮ್ಮ “ಧಾಕಡ್” ಸಿನಿಮಾದ ಟ್ರೈಲರ್ ಬಿಡುಗಡೆ ವೇಳೆ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಧರಿಸಿದ್ದ ಉಡುಗೆ ಪಡ್ಡೆ ಹುಡುಗರ ಹುಬ್ಬೇರಿಸಿದೆ.
ಪ್ಲಂಗಿಂಗ್ ನೆಕ್ಲೈನ್ ಇರುವ ಕಪ್ಪು ಬಣ್ಣದ ಬೋಲ್ಡ್ ಧಿರಿಸನ್ನು ಧರಿಸಿ ಕಂಗನಾ ಟ್ರೈಲರ್ ಬಿಡುಗಡೆ ಕಂಗನಾ ಅವರು ತಮ್ಮ ಹೊಸ ಅವತಾರವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಧಾಕಡ್ ದಿನ… ಸಂಜೆ 4 ಗಂಟೆ ಟ್ರೈಲರ್ ಬಿಡುಗಡೆಯಾಗಿದೆ.
ಈ ನೋಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವಳು ತುಂಬಾ ಸುಂದರವಾಗಿದ್ದಾಳೆ ಅಲ್ಲವೇ? ಎಂಬ ಅಡಿಬರವನ್ನು ನೀಡಿದ್ದಾರೆ.
ಸದ್ಯ ಕಂಗನಾರ ಹೊಸ ಅವತಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ರೋಲ್ ಆಗುತ್ತಿದೆ. ಮೇಡಂ ನೀವು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಆಗಲಿದ್ದೀರಾ? ಈ ರೀತಿಯ ಡ್ರೆಸ್ ಹಾಕಬೇಡಿ ಎಂದು ನೆಟ್ಟಿಗನೊಬ್ಬ ಹೇಳಿದ್ದಾನೆ.
ಮೇಡಂ ನೀವು ಸೀರೆಯಲ್ಲಿ ಚೆನ್ನಾಗಿ ಕಾಣುತ್ತೀರಾ, ಈ ರೀತಿಯ ಡ್ರೆಸ್ ಹಾಕಬೇಡಿ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ.
ಇನ್ನು ಕೆಲವರು ತುಂಬಾ ಹಾಟ್ ಕಾಣುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದು, ಸದ್ಯ ಕಂಗನಾರ ಹೊಸ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇನ್ನು ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕಂಗನಾ, ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ನಡುವಿನ ಹಿಂದಿ ಭಾಷೆ ಕುರಿತ ಟ್ವೀಟ್ ವಾರ್ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.
ಹಿಂದಿ ರಾಷ್ಟ್ರಭಾಷೆ ಎಂದು ಸುಳ್ಳೇ ಹೇಳಿ ಕನ್ನಡಿಗರು ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷಿಕರಿಂದಲೂ ಬಾಲಿವುಡ್ ನಟ ಅಜಯ್ ದೇವಗನ್ ವ್ಯಾಪಕ ಟ್ರೋಲ್ಗೆ ಒಳಗಾದ ಬೆನ್ನಿಗೆ ನಟಿ ಕಂಗನಾ ರಣಾವತ್ ಕೂಡ ಹಿಂದಿ ರಾಷ್ಟ್ರಭಾಷೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ
ಹಿಂದಿ ರಾಷ್ಟ್ರಭಾಷೆ ಎನ್ನುವ ವಿಚಾರವಾಗಿ ನಟರಾದ ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ಮಧ್ಯೆ ನಡೆದ ಟ್ವಿಟರ್ ವಾಗ್ವಾದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ಅಜಯ್ ಹಿಂದಿ ರಾಷ್ಟ್ರಭಾಷೆ ಎಂದು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಪ್ರತಿಯೊಬ್ಬರಿಗೂ ಅವರ ಭಾಷೆ-ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವ ಹಕ್ಕು ಇದೆ ಎಂದಿದ್ದಾರೆ.
ಹಾಗೆ ನೋಡಿದರೆ ಸಂಸ್ಕೃತ ನಮ್ಮ ರಾಷ್ಟ್ರಭಾಷೆ ಆಗಬೇಕಿತ್ತು. ಏಕೆಂದರೆ ಹಿಂದಿ, ಜರ್ಮನ್, ಇಂಗ್ಲಿಷ್, ಫ್ರೆಂಚ್ ಎಲ್ಲ ಭಾಷೆಗಳೂ ಅದರಿಂದಲೇ ಹೊಮ್ಮಿರುವಂಥವು.
ನಮಗ್ಯಾಕೆ ಸಂಸ್ಕೃತ ರಾಷ್ಟ್ರಭಾಷೆ ಆಗಬಾರದು, ಯಾಕೆ ಅದನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಿಲ್ಲ ಎಂದೂ ಆಕೆ ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲದೆ, ಹಿಂದಿ ರಾಷ್ಟ್ರಭಾಷೆ ಎನ್ನುವುದನ್ನು ಸಂವಿಧಾನವನ್ನು ನಿರಾಕರಿಸಿದಂತೆ. ದೆಹಲಿ ದೇಶದ ರಾಜಧಾನಿ, ಇಲ್ಲಿ ಯಾವುದೇ ಕಾಯ್ದೆ, ಏನೇ ಮಾಡಿದರೂ ಅದನ್ನು ಹಿಂದಿಯಲ್ಲಿ ಮಾಡುತ್ತಾರೆ.
ಹೀಗಾಗಿ ಹಿಂದಿಯನ್ನು ನಿರಾಕರಿಸುವುದು ದೆಹಲಿಯನ್ನು ಹಾಗೂ ಸಂವಿಧಾನವನ್ನು ನಿರಾಕರಿಸಿದಂತೆ ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ.
ಕಂಗನಾ ಅವರ ಮಾತಿಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.