ಶಿರ್ವ:-ಕರ್ನಾಟಕ ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲಿ ಸುಮಾರು 40 ವರ್ಷಗಳ ಕಾಲ ಪ್ರಥಮದರ್ಜೆ ಗುಮಾಸ್ತರಾಗಿ ಕರ್ತವ್ಯದಲ್ಲಿದ್ದು, ಮಡಿಕೇರಿ, ಮಂಗಳೂರು ಮತ್ತು ಉಡುಪಿ ಜಿಲ್ಲಾ ಕೇಂದ್ರಗಳಲ್ಲಿ ಸೇವೆಸಲ್ಲಿಸಿದ್ದ ಬಂಟಕಲ್ಲು ಸಮೀಪದ ಸಡಂಬೈಲು ಮೇಲ್ಮನೆ ಬಿ.ರಾಮರಾಯ ನಾಯಕ್(ವಾಗ್ಲೆ (77ವ) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಪತ್ನಿ, ಉಡುಪಿ ಸಿಟಿ ಆಸ್ಪತ್ರೆಯ ಖ್ಯಾತ ಮೂಳೆತಜ್ಞ ಡಾ.ಹರೀಶ್ ಆರ್ ನಾಯಕ್ ಸೇರಿದಂತೆ 2ಗಂಡು,2 ಹೆಣ್ಣುಮಕ್ಕಳು, ಮರಿಮಕ್ಕಳು ಮತ್ತು ಅಪಾರಬಂಧುಗಳನ್ನು ಅಗಲಿದ್ದಾರೆ.