ವಿಕಲಚೇತನ ಜಗದೀಶ್ ಭಟ್ ನೆರೆವೇರಿಸಿದ ಬ್ರಾಹ್ಮಣ ಮಹಿಳೆಯ ಅಂತ್ಯಕ್ರಿಯೆ

ಉಡುಪಿ: ಬ್ರಹ್ಮಾವರದ ಅಪ್ಪ – ಅಮ್ಮ ಆಶ್ರಮದಲ್ಲಿ ಕಳೆದ 2 ವರ್ಷಗಳಿಂದ ನೆಲೆಕಂಡ ಮಹಿಳೆ ಅನಾರೋಗ್ಯಕ್ಕೆ ತುತ್ತಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಬ್ರಾಹ್ಮಣ ಮಹಿಳೆಯ ಅಂತ್ಯಕ್ರಿಯೆಯನ್ನು ವಿಶು ಶೆಟ್ಟಿ ಅಂಬಲಪಾಡಿ ಬೀಡಿನಗುಡ್ಡೆಯಲ್ಲಿ ನೆರವೇರಿಸಿದ ಘಟನೆ ನ.6ರಂದು ನಡೆದಿದೆ.

ಮೃತ ಮಹಿಳೆ ಶಾರದಾ ಭಟ್(60ವ) ಉಡುಪಿಯ ಧಾರ್ಮಿಕ ಕೇಂದ್ರವೊಂದರಲ್ಲಿ ಸಹಾಯಕಳಾಗಿದ್ದು ಕೆಲಸ ಕಳೆದುಕೊಂಡ ನಂತರ ಬೀದಿ ಪಾಲಾದಾಗ ಅಪ್ಪ- ಅಮ್ಮ ಆಶ್ರಮದವರು ಮಹಿಳೆಗೆ ನೆಲೆ ಕಲ್ಪಿಸಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೀಡಾದ ಮಹಿಳೆಯನ್ನು ಆಶ್ರಮದ ಸಂಚಾಲಕ ಪ್ರಶಾಂತ್ ಪೂಜಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.

ಬ್ರಾಹ್ಮಣ ಮಹಿಳೆ ಎಂಬ ಮಾಹಿತಿ ಇರುವುದರಿಂದ ಅಂತ್ಯಕ್ರಿಯೆಯ ವಿಧಿಗಾಗಿ ವಿಶು ಶೆಟ್ಟಿಯವರು ಉಡುಪಿ ಜಿಲ್ಲಾ ವಿಕಲ ಚೇತನ ಸಂಘದ ಉಪಾಧ್ಯಕ್ಷ ಜಗದೀಶ್ ಭಟ್ ಗೆ ವಿನಂತಿಸಿದ್ದರು. ಸ್ಪಂದಿಸಿದ ಜಗದೀಶ್ ಭಟ್ ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸಿದರು.

ಬ್ರಹ್ಮಾವರ ಠಾಣಾ ಪೊಲೀಸರು ಕಾನೂನು ಪ್ರಕ್ರಿಯೆ ನಡೆಸಿದರು. ಸಾಮಾಜಿಕ ಕಾರ್ಯಕರ್ತ ರಾಮದಾಸ್ ಪಾಲನ್ ಉದ್ಯಾವರ ಸಹಕರಿಸಿದರು. ಅಂಬಲಪಾಡಿ ಕೃಷ್ಣ ಉಚಿತ ಜೆಸಿಬಿ ನೀಡಿದರು.

 
 
 
 
 
 
 
 
 
 
 

Leave a Reply