ಮೆಡಿಕಲ್ ಶಾಪಿನ ಮಾಲಕ ವಾಮನ್ ನಾಯಕ ಇನ್ನಿಲ್ಲ!

ಪರ್ಕಳ ದ ಹೃದಯ ಭಾಗದಲ್ಲಿರುವ ಮೆಡಿಕಲ್ ಶಾಪಿನ ಮಾಲಕ ವಾಮನ ನಾಯಕ್ ಉಡುಪಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತ ಹೊಂದಿದ್ದಾರೆ, ತೀವ್ರತರದಲ್ಲಿ ತಲೆಗೆ ಏಟಾಗಿದೆ,, ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ನಂತರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ, ನಿಧನ ಹೊಂದಿದ್ದಾರೆ ಮೃತರ ಉತ್ತಮ ಭಜನೆ ಭಕ್ತಿಗೀತೆ, ಹಾಗೂ ಸಂಗೀತದ ಪರಿಕರಗಳನ್ನು ನುಡಿಸುತ್ತಿದ್ದರು, ಹಾಡುಗಾರಿಯಿಂದ ಉಡುಪಿಯ ಸುತ್ತಮುತ್ತ ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಡುಗಾರಿಕೆಯ ಮೂಲಕ ಜನಮನ್ನಣೆ ಗಳಿಸಿದ್ದರು,, ಅಪಘಾತ ನಡೆದ ಸ್ಥಳದಲ್ಲಿ ಬೇರೆವೊಂದು ವಾಹನ ನಿಲ್ಲಿಸದೆ ಪರಾರಿಯಾಗಿದ್ದಾರೆ, ಹಿಟ್ ಅಂಡ್ ರನ್ ಕೇಸ್ ದಾಖಲಾಗಿದೆ ಎಂದು ಪ್ರಥಮ ಮಾಹಿತಿಯ ಮೂಲಕ ತಿಳಿದು ಬಂದಿದೆ ಎನ್ನಲಾಗಿದೆ,,
ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಪರ್ಕಳದ ಮೋಹನ್ ದಾಸ್ ನಾಯಕ್ ಗಣೇಶ್ ರಾಜ್ ಸರಳೇಬೆಟ್ಟು ತೀವ್ರಸಂತಾಪ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 
 
 

Leave a Reply