ತುಳುನಾಡಿನ ಬಾವುಟಕ್ಕೆ ಅವಮಾನ:  ಪೊಲೀಸರಿಂದ ಆರೋಪಿ ಸೂರ್ಯನ ಬಂಧನ

ಮಂಗಳೂರು: ನಗರದಲ್ಲಿ ತುಳುನಾಡಿನ ಬಾವುಟವನ್ನು ಚಪ್ಪಲಿಗೆ ಎಡಿಟ್ ಮಾಡಿ ಹಾಕಿ ಅವಮಾನಗೊಳಿಸಿದ್ದ ಮತ್ತು ಅಶ್ಲೀಲ  ಬರಹದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದ  ಬೆಂಗಳೂರು ಮೂಲದ ವ್ಯಕ್ತಿಯೊಬ್ಬನನ್ನು ಬರ್ಕೆ ಪೊಲೀಸರು ಇಂದು ಬಂಧಿಸಿದ್ದಾರೆ.

 
ಬಂಧಿತ ಆರೋಪಿಯು ಬೆಂಗಳೂರು ಶ್ರೀರಾಮ್ ಪುರದ ನಿವಾಸಿ ಎನ್.ಕೆ ಸೂರ್ಯ ಎಂದು ತಿಳಿದು ಬಂದಿದೆ.  ಜೂ. 6 ರಂದು ಸೂರ್ಯ ಎಂಬವ ತುಳು ಬಾವುಟವನ್ನು ಎಡಿಟ್ ಮಾಡಿ ನಂತರ ಅಶ್ಲೀಲ ಬರಹಗಳನ್ನು ಬರೆದು ಹಾಕಿ ತುಳುವರ ಭಾವನೆಗೆ ಧಕ್ಕೆ ಉಂಟು ಮಾಡಿದ್ದ. 
 
ಅದೇ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜಗಳ ಮತ್ತು ಚರ್ಚೆಯಾಗಿತ್ತು. ಆಗ ಮಂಗಳೂರಿನ ಮಾಜಿ ಮೇಯರ್ ಮತ್ತು ಕಾರ್ಪೊರೇಟ್ ಶಶಿಧರ್ ಹೆಗ್ಡೆ ಅವರ ನೇತೃತ್ವದ ತಂಡ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಿತ್ತು.
 
ಆದರ ಆಧಾರದ ಮೇಲೆ ತನಿಖೆ ಮಾಡಿದ ಬರ್ಕೆ ಪೊಲೀಸರ ತಂಡ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
 
 
 
 
 
 
 
 
 
 
 

Leave a Reply