ಉಡುಪಿ : ಬ್ರಹ್ಮಾವರ ಪೊಲೀಸ್ ಠಾಣಾ ಸರಹದ್ದಿನ ಕುಮ್ರಗೋಡು ಗ್ರಾಮದ ಮಿಲನ ರೆಸಿಡೆನ್ಸಿಯ ಪ್ಲಾಟ್ ನಂಬ್ರ ಕ-21ರಲ್ಲಿ ಶ್ರೀಮತಿ ವಿಶಾಲ ಗಾಣಿಗ ಇವರು ಒಂಟಿಯಾಗಿದ್ದ ಸಮಯದಲ್ಲಿ ದಿನಾಂಕ 12/07/2021 ರಂದು ಮಧ್ಯಾಹ್ನದ ಸಮಯದಲ್ಲಿ ಯಾರೋ ಅಪರಿಚಿತ ವ್ಯಕ್ತಿ ಪ್ಲಾಟೊಳಗೆ ಪ್ರವೇಶ ಮಾಡಿ, ಶ್ರೀಮತಿ ವಿಶಾಲ ಗಾಣಿಗರವರನ್ನು ಎಲೆಕ್ನಿಕ್ ವಯರ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ, ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿರುವ ಬಗ್ಗೆ ಮಾಹಿತಿ ಬಂದಿತ್ತು.
ಈ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸ್ ಇಲಾಖೆ ಅನಂತ ಪದ್ಮನಾಭ, ಸಿಪಿಐ ಬ್ರಹ್ಮಾವರ ಮತ್ತು ಪಿ.ಎಸ್.ಐ ರವರಾದ ಗುರುನಾಥ ಬಿ ಹಾದಿಮನಿ ರವರ ತಂಡ, ಮಂಜುನಾಥ, ಪಿ.ಐ, ಮಣಿಪಾಲ ಮತ್ತು ಪಿ.ಎಸ್.ಐ ರಾಜಶೇಖರ ವಂದಲಿ, ಶರಣಗೌಡ, ಸಿಪಿಐ, ಮಲ್ಪೆ ವೃತ್ತ ಮತ್ತು ಪಿ.ಎಸ್.ಐ ರ ಮಧು, ಸಂಪತ್ಕುಮಾರ್ ಎ, ಸಿಪಿಐ ಕಾರ್ಕಳ ಮತ್ತು ಪಿ.ಎಸ್.ಐ, ರಾಘವೇಂದ್ರ ಸಿ ಮತ್ತು ಶ್ರೀ ಶ್ರೀಧರ್ ನಾಯ್ಕ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಆರ್.ಡಿ.ಸಿ.ಯ ತಾಂತ್ರಿಕ ತಂಡ ಒಳಗೊಂಡಂತೆ ಒಟ್ಟು 5 ವಿಶೇಷ ತಂಡಗಳನ್ನು ಆರೋಪಿಗಳ ಪತ್ತೆಗೆ ರಚಿಸಲಾಗಿರುತ್ತದೆ.
ಆರೋಪಿಗಳ ಪತ್ತೆಗೆ ವಿಶೇಷ ತಂಡದ ಅಧಿಕಾರಿ ಮಂಜುನಾಥ ಪಿ.ಐ ಮಣಿಪಾಲ, ಶರಣ ಗೌಡ, ಸಿಪಿಐ ಮಲ್ಪೆ, ಮಧು ಪಿ.ಎಸ್.ಐ ಕಾರ್ಕಳ ಮತ್ತು ರಾಜಶೇಖರ ವಂಡಲಿ, ಪಿ.ಎಸ್.ಐ ಮಣಿಪಾಲ ಇವರುಗಳು ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಯತ್ನ ನಡೆಸಿ, ನಂತರ ಬೇರೆ ರಾಜ್ಯಗಳಿಗೂ ತೆರಳಿ ನಂತರ ಮಹತ್ವದ ಸುಳಿವಿನ ಆಧಾರದಲ್ಲಿ ಉತ್ತರ ಪ್ರದೇಶದ ಗೋರುರಕ್ಕೆ ತೆರಳಿ ಅಲ್ಲಿನ ಎಸ್.ಎಸ್.ಪಿ. ದಿನೇಶ್ ಕುಮಾರ್ ಐ.ಪಿ.ಎಸ್. ಹಾಗೂ ಅವರ SWAT ತಂಡದ ಸಹಭಾಗಿತ್ವದಲ್ಲಿ ಸಂಶಯಿತ ಆರೋಪಿ ಸ್ವಾಮಿನಾಥ ನಿಶಾದ ಪ್ರಾಯ 38 ವರ್ಷ ತಂದೆ ವಿಜಯ ನಿಶಾದ ವಾಸ: ಚಾರ್ಪನ್ ಬುಹುರಾಗ್ಗ್ರಾಮ, ದವರಪ್ಅಂಚೆ, ಗೋರುರ ಜಿಲ್ಲೆ, ಉತ್ತರ ಪ್ರದೇಶ ಎಂಬಾತನನ್ನು ಗೋರುರದಲ್ಲಿ ಬಂಧಿಸಿ ವಿಚಾರಣೆ ನಡೆಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಅನಂತ ಪದ್ಮನಾಭ, ಸಿ.ಪಿ.ಐ., ಬ್ರಹ್ಮಾವರ, ಮಂಜುನಾಥ ಪಿ.ಐ. ಮಣಿಪಾಲ, ಶರಣಗೌಡ, ಸಿಪಿಐ, ಮಲ್ಪೆ ವೃತ್ತ, ಪ್ರಮೋದ್ ಪಿ.ಐ, ಉಡುಪಿ ನಗರ ಠಾಣೆ, ಸಂಪತ್ ಕುಮಾರ್ ಎ, ಸಿಪಿಐ ಕಾರ್ಕಳ, ಗುರುನಾಥ ಬಿ ಹಾದಿಮನಿ, ಪಿ.ಎಸ್.ಐ ಬ್ರಹ್ಮಾವರ, ಮಧು ಪಿ.ಎಸ್.ಐ ಕಾರ್ಕಳ ನಗರ, ಶ್ರೀ ರಾಘವೇಂದ್ರ ಪಿ.ಎಸ್.ಐ ಕಾಪು, ಶ್ರೀಧರ ನಾಯ್ಕ, ಪಿ.ಎಸ್.ಐ, ಶಂಕರನಾರಾಯಣ ಠಾಣೆ, ಕೆ.ಆರ್ ಸುನಿತಾ, ಮ.ಪಿ.ಎಸ್.ಐ ಬ್ರಹ್ಮಾವರ, ಸಂತೋಷ ಬಿ.ಪಿ, ಪಿ.ಎಸ್.ಐ ಕೋಟ.