ಉಡುಪಿ: ನಕಲಿ ನೊಂದಣಿ ಫಲಕವಿದ್ದ ವಾಹನವನ್ನು ಮುಟ್ಟುಗೊಲು ಹಾಕಿ ಬೈಂದೂರು ಪೋಲೀಸ್ ಠಾಣಾ ವಶಕ್ಕೆ ಸೋಮವಾರ ನೀಡಲಾಗಿದೆ. ವಾಹನ ಮೂಲತಃ KA04. B3693 ಆಗಿರುತ್ತದೆಎಂದು ವಾಹನ ದಾಖಲಾತಿ ಪರಿಶೀಲನೆಯಿಂದ ಕಂಡುಬಂದಿದೆ.
ದಿ. 14.05.2021ರಂದು ಕಾಲತೋಡು ಕಂಬದಕೋಣೆ, ಕುಂದಾಪುರಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆಪಿ ಗಂಗಾಧರ, ಮೋಟಾರು ವಾಹನ ನಿರೀಕ್ಷಕ ಸಂತೋಷ್ ಶೆಟ್ಟಿ ತಂಡದೊಂದಿಗೆ ತೆರಳಿ ದೂರವಾಣಿ ಮುಖಾಂತರ ಇಲ್ಲಿಯ ನಿವಾಸಿ ಸಚಿನ್ ಶೆಟ್ಟಿ ಯನ್ನು ವಿಚಾರಿಸಿ ಮರುದಿನವೇ ವಾಹನವನ್ನು ಠಾಣಾವಶಕ್ಕೆ ನೀಡುವುದಾಗಿ ತಿಳಿಸಿದ್ದರು.
ವಾಹನದ ದಾಖಲಾತಿಗಳೊಂದಿಗೆ ವಾಹನ ಮಾಲೀಕರು ಖುದ್ದಾಗಿ ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಯ ಕಚೇರಿಗೆ ಮಧ್ಯಾಹ್ನ 2 ಗಂಟೆಯ ಒಳಗೆ ಅರ್ಜಿ ನೀಡಿ, ತೆರಿಗೆ ಹಾಗೂ ದಂಡವನ್ನು ಪಾವತಿಸಿ ವಾಹನ ಬಿಡುಗಡೆ ಪತ್ರ ಪಡೆಯಬಹುದಾಗಿದೆ ಎಂದು ಪ್ರಾ. ಸಾ. ಅ. ಉಡುಪಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.