ಮೂಡುಬಿದಿರೆ ಯಕ್ಷ ಸಂಭ್ರಮಕ್ಕೆ ಚಾಲನೆ

 ಮೂಡುಬಿದಿರೆಯಲ್ಲಿ ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿಯ 26 ನೇ ವರ್ಷದ ಯಕ್ಷ ಸಂಭ್ರಮ -2023 ಯಕ್ಷಗಾನದ ಸರ್ವ ಆಯಾಮಗಳ ಬೃಹತ್ ಸಂಕಲನ ಶಿರೋನಾಮೆಯ ಕಾರ್ಯಕ್ರಮವನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಿರಂತರ ಕಲಾ ಸೇವೆಯಲ್ಲಿ ತೊಡಗಿಕೊಂಡಿರುವ ದೇವಾನಂದ್ ಭಟ್ ಬಳಗದ ಕೆಲಸ ಅಭಿನಂದನಾರ್ಹ ಎಂದು ಪ್ರಶಂಸಿದರು. ಗೌರವಾಧ್ಯಕ್ಷ ಉದ್ಯಮಿ ಕೆ .ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಅರ್ಚಕ ಕೃಷ್ಣ ತಂತ್ರಿ ಆಶೀರ್ವಚನ ಮಾಡಿದರು. ಉದ್ಯಮಿಗಳಾದ ಅಶೋಕ್ ಕಾಮತ್ ,ಎ.ಕೆ.ರಾವ್, ಕರ್ನಾಟಕ ಬ್ಯಾಂಕ್ ನ ನಿವೃತ್ತ ಜಿಎಂ ಚಂದ್ರಶೇಖರ ರಾವ್, ಬ್ಲೋಸಮ್ ಶಾಲೆಯ ಸ್ಥಾಪಕ ಸೈಮನ್ ಮಸ್ಕರೇನಸ್,ಯಕ್ಷ ಕಲಾಪೋಷಕ ಭುಜಬಲಿ ಧರ್ಮಸ್ಥಳ ಅತಿಥಿಗಳಾಗಿದ್ದರು. ಮಂಡಳಿಯ ಸಂಸ್ಥಾಪಕ ಎಂ.ದೇವಾನಂದ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ರವಿಪ್ರಸಾದ್ ಕೆ.ಶೆಟ್ಟಿ ವಂದಿಸಿದರು. ಯಕ್ಷ ಮೇನಕ ಮೂಡುಬಿದಿರೆಯ ಸದಾಶಿವ ರಾವ್ ನೆಲ್ಲಿಮಾರ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply