ಸುಮೇಧ ವಿಶೇಷ ಮಕ್ಕಳ ಶಾಲೆಯಲ್ಲಿ ರೋಟರಿ ಉಡುಪಿ ಯಿಂದ ಸಮವಸ್ತ್ರ ವಿತರಣೆ

ನೀಲಾವರದ ಸುಮೇಧ ವಿಶೇಷ ಮಕ್ಕಳಶಾಲೆಗೆ ರೋಟರಿ ಉಡುಪಿಯಿಂದ ಕೊಡಮಾಡಿದ ಸಮವಸ್ತ್ರ ವನ್ನು ಅಮೇರಿಕಾದ ಸೆಂಟ್ರಲ್ ಚೆಸ್ಟರ್ ಕೌಂಟಿಕ್ಲಬ್ ನ ರೋ.ವಸಂತಪ್ರಭುಗಳು ವಿತರಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷೆ ರೋ ದೀಪಾಭಂಡಾರಿಯವರು ಸ್ವಾಗತಿಸಿದ ನಂತರ ರೋ.ರಾಮಚಂದ್ರ ಉಪಾಧ್ಯಾಯ ರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮವಸ್ತ್ರ ವನ್ನು ಪ್ರಾಯೋಜಿಸಿದ ರೋ.ಗೋಕುಲ್ ದಾಸ ಪೈಯವರು ಮಕ್ಕಳಿಗೆ ಸಮವಸ್ತ್ರ ವನ್ನು ವಿತರಿಸಿ ಈ ಸಂಸ್ಥೆ ಯ ಈ ಉತ್ತಮ ಕಾರ್ಯ ವು ಮುಂದುವರಿಯಲಿ ಎಂದು ಆಶಿಸಿ ಹಾಗೂ ಇಂತಹ ಉತ್ತಮ ಕಾರ್ಯ ದಲ್ಲಿ ಬಾಗಿಯಾಗಲು ಸಂತಸವಾಗುವುದೆಂದು ಹೇಳಿ ಶುಭ ಹಾರೈಸಿದರು. ಅಮೇರಿಕಾದ ರೋ. ವಸಂತಪ್ರಭುಗಳು ಮಾತಾಡಿ ಈ ಸಂಸ್ಥೆ ಯೊಡಗಿನ ತಮ್ಮ ಬಾಂಧವ್ಯ ವನ್ನು, ನೆನಪಿಸಿಕೊಂಡು ಅದನ್ನು ಮುಂದುವರಿಸುವ ಇಚ್ಚೆ ವ್ಯಕ್ತಪಡಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀ ಮತಿ ಸುಮನಾ ಪ್ರಭು ದನ್ಯವಾದ ಸಮರ್ಪಿಸಿದರು. ಸಂಸ್ಥೆ ಯ ಕಾರ್ಯದರ್ಶಿ ರೋ ಜನಾರ್ದನ ಭಟ್ಟರು ಕಾರ್ಯಕ್ರಮ ವನ್ನು ಸಂಯೋಜಿಸಿದ್ದರು. ನಂತರ ರೋಟರಿ ಉಡುಪಿ ಕೊಡಮಾಡಿದ ಕೈತೊಳೆಯುವ ಸಾದನವನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ರೋ. ಗುರುರಾಜ ಭಟ್, ರೋ. ದಿನೇಶಭಂಡಾರಿ, ರೋ.ಗೋಪಾಲಕೃಷ್ಣ ಪ್ರಭು, ಕಾರ್ಯದರ್ಶಿ ರೋ.ಶುಭಾಬಾಸ್ರಿ, ರೋ.ವನಿತಾ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply