ಉಡುಪಿಯಲ್ಲಿ ನ.1ರಂದು ಕರಾವಳಿ ಕೋಗಿಲೆಗಳ ಗಾನಯಾನ

 ಉಡುಪಿ: ಉಡುಪಿ ಸೃಷ್ಠಿ ಫೌಂಡೇಶನ್ ಮತ್ತು ಕಟಪಾಡಿ ದಿಶಾ ಕಮ್ಯೂನಿಕೇಶನ್ಸ್ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.1 ರಂದು ಮಧ್ಯಾಹ್ನ 2 ಕ್ಕೆ ಕರಾವಳಿ ಕೋಗಿಲೆ ಗಳ ಗಾನಯಾನ – ಗಾನಗಂಧರ್ವ ಡಾ. ಎಸ್ ಪಿ ಬಿ ಹಾಡುಗಳ ಉತ್ಸವ ಉಡುಪಿ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ನಡೆಯಲಿದೆ. ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿಯ ಕಲಾಪೋಷಕ ಭುವನ ಪ್ರಸಾದ್ ಹೆಗ್ಡೆ, ಮಲ್ಪೆಯ ಉದ್ಯಮಿ ಸಾಧು ಸಾಲಿಯಾನ್, ಉಡುಪಿಯ ಸ್ಮರಣಿಕಾ ಸಂಸ್ಥೆಯ ಮಾಲಕ ದಿವಾಕರ್ ಸನಿಲ್, ಬ್ರಹ್ಮಾವರ ನ್ಯೂ ಕರ್ನಾಟಕ ಬಿಲ್ಡರ್ಸ್ & ಡೆವಲಪರ್ಸ್ ಸಂಸ್ಥೆಯ ಮಾಲಕ ಚೇತನ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸುವರು. ಇದೇ ಸಂದರ್ಭ ಖ್ಯಾತ ಗಾಯಕ ಡಾ.ಗಣೇಶ್ ಕುಮಾರ ಗಂಗೊಳ್ಳಿ ಅವರಿಗೆ ಸಂಗೀತ ರತ್ನ ಹಾಗೂ ಯುವ ಸಂಕಲನಕಾರ ಸುಹಾಸ್ ಶೆಣೈ ಮಣಿಪಾಲ ಅವರಿಗೆ ಯುವರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಾರ್ಯಕ್ರಮ ಸಂಘಟಕರಾದ ಪ್ರಕಾಶ ಸುವರ್ಣ ಕಟಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply