ಉಡುಪಿ – ಆಶ್ರಯ ಹಂಬಲಿಸುತ್ತಿದ್ದ ವೃದ್ಧರ ರಕ್ಷಣೆ

ಉಡುಪಿ : ಸಾಸ್ತಾನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿಯ ಹೊತ್ತು ಮಳೆಯಲ್ಲಿ ಅಸಹಾಯಕರಾಗಿ ಆಶ್ರಯ ಹಂಬಲಿಸುತ್ತಿದ್ದ ವೃದ್ಧರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಮಣಿಪಾಲದ ಹೊಸಬೆಳಕು ಆಶ್ರಮದಲ್ಲಿ ದಾಖಲಿಸಿದ ಘಟನೆ ಭಾನುವಾರ ನಡೆದಿದೆ. 

ವೃದ್ಧರ ಹೆಸರು ಸುಬ್ರಾಯ ನಾಯಕ್(75) ಊರು ಕೊಳಲಗಿರಿ ಆರೂರು, ಮಗ ರಮೇಶ್ ಸುಂದರ ಎಂದು ಹೇಳಿದ್ದಾರೆ. ಸಾರ್ವಜನಿಕರ ಸಹಾಯಕ್ಕೆ ಅಂಗಲಾಚುವ ಸಮಯ ರಕ್ಷಿಸಲಾಗಿದೆ. ವಿಶು ಶೆಟ್ಟಿಯವರ ಮನವಿಗೆ ಹೊಸಬೆಳಕು ಆಶ್ರಮದವರು ಆಶ್ರಯ ನೀಡಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಸ್ಥಳೀಯರಾದ ಮಣಿ ಎಂ.ಕೆ. ಹಾಗೂ ರಿಕ್ಷಾ ಚಾಲಕ ಗಿರೀಶ್ ಸಹಕರಿಸಿದ್ದಾರೆ. ಸಂಬಂಧಿಕರು ಹೊಸಬೆಳಕು ಆಶ್ರಮ ಸಂಪರ್ಕಿಸಬೇಕಾಗಿ ವಿನಂತಿ. ಮೊಬೈಲ್ 9620417570.

 
 
 
 
 
 
 
 
 
 
 

Leave a Reply