ಸಚಿವರಿಂದ ಗ್ರಂಥಾಲಯಗಳಿಗೆ ಪುಸ್ತಕಗಳ ಹಸ್ತಾಂತರ

ಉಡುಪಿ : ಕರ್ನಾಟಕ ಸರ್ಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೂತನ ಸಚಿವರಾಗಿ ಆಯ್ಕೆಯಾದ ಸಂದರ್ಭದಲ್ಲಿ ಸಚಿವ ವಿ ಸುನೀಲ್ ಕುಮಾರ್‌ ಗೆ ಜನಸಾಮಾನ್ಯರು, ಗಣ್ಯರು ಅಭಿನಂದಿಸುವಾಗ ಹಾರ ತುರಾಯಿಯನ್ನು ಸ್ವೀಕರಿಸದೆ, ಪುಸ್ತಕಗಳನ್ನು ನೀಡಿ ಗೌರವಿಸಲು ತಿಳಿಸಿದ್ದರು. ಗೌರವ ಕಾಣಿಕೆಯಾಗಿ ಬಂದಂತಹ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ನೀಡುವುದಾಗಿ ಹೇಳಿದ್ದರು.

ಈಗಾಗಲೇ ರಾಜ್ಯದ ವಿವಿಧೆಡೆ ಸಚಿವರಿಗೆ ಅಭಿನಂದನೆಯಾಗಿ ಪುಸ್ತಕ ರೂಪದಲ್ಲಿ ಹಿಂದೂ ಧಾರ್ಮಿಕ ಗ್ರಂಥಗಳು, ಕಾದಂಬರಿ, ಯಕ್ಷಗಾನ, ನಾಟಕ, ಮಹಾನ್ ಪುರುಷರ ಲೇಖನ, ಕಾನೂನು, ಸಂವಿಧಾನದ ಪುಸ್ತಕಗಳು ಸೇರಿದಂತೆ ಮತ್ತಿತರ ಪುಸ್ತಕಗಳು ಸೇರಿ ಸುಮಾರು 5,20,594 ಮೌಲ್ಯದ
3009 ಲಭ್ಯವಾಗಿದೆ.

ಸೆಪ್ಟೆಂಬರ್ 9 ರಂದು ಸಂಜೆ 4 ಗಂಟೆಗೆ ಕಾರ್ಕಳದ ವಿಕಾಸಸೌಧದಲ್ಲಿ ಅಭಿನಂದನೆಯಾಗಿ ದೊರೆತಿರುವ ಪುಸ್ತಕಗಳ ಪ್ರದರ್ಶನ ಮತ್ತು ಅವುಗಳನ್ನು ಗ್ರಂಥಾಲಯಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರು, ಹಿರಿಯ, ಕಿರಿಯ ಸಾಹಿತಿಗಳು ಭಾಗವಹಿಸಲಿದ್ದಾರೆ.

 
 
 
 
 
 
 
 
 
 
 

Leave a Reply