ಅಂಗಡಿ ಮಾಲೀಕರೊಂದಿಗೆ ಶಾಸಕ ರಘುಪತಿ ಭಟ್ ಸಭೆ

ಉಡುಪಿಯಲ್ಲಿ ಅತೀ ಹೆಚ್ಚು ವಾಹನ ಸಂಚಾರವಿರುವ ಸಂತೆಕಟ್ಟೆ – ಕಲ್ಯಾಣಪುರ ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿ ಪಡಿಸಲು ಶಾಸಕ ಕೆ. ರಘುಪತಿ ಭಟ್ ಅವರ ಶಿಫಾರಸ್ಸಿನಂತೆ ಲೋಕೋಪಯೋಗಿ ಇಲಾಖೆಯಿಂದ ರೂ. 3 ಕೋಟಿ ಅನುದಾನ ಮಂಜೂರಾಗಿದೆ.

ಈ ರಸ್ತೆಯ ಇಕ್ಕೆಲಗಳಲ್ಲಿ ಕೆಲವೊಂದು ಗೂಡಂಗಡಿಗಳಿದ್ದು ರಸ್ತೆ ಅಗಲಗೊಳಿಸಲು ಇವುಗಳನ್ನು ಸ್ಥಳಾಂತರಿಸುವ ಕುರಿತು ಸೋಮವಾರದಂದು ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ನಗರಸಭೆ ಸಭಾಂಗಣದಲ್ಲಿ ಅಂಗಡಿ ಮಾಲೀಕರೊಂದಿಗೆ ಸಭೆ ನಡೆಸಿದರು.ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಗರ ಸಭೆಯಿಂದ ತ್ವರಿತವಾಗಿ ದಿನಾಂಕ 07-10-2020ರ ಒಳಗೆ ರಸ್ತೆ ಅಂಚುಗಳನ್ನು ಗುರುತಿಸಿ ರಸ್ತೆ ಅಂಚಿನಲ್ಲಿರುವ ಗೂಡಂಗಡಿಗಳನ್ನು, ಶೆಡ್ ನಿರ್ಮಿಸಿರುವ ಅಂಗಡಿಗಳನ್ನು ದಿನಾಂಕ 08-10-2020ಕ್ಕೆ ನಗರ ಸಭೆ ಸೂಚಿಸಿದ ಜಾಗಕ್ಕೆ ಸ್ಥಳಾಂತರಗೊಳಿಸುವಂತೆ ಸೂಚಿಸಿದರು.

ನಗರ ಸಭೆ ಪೌರಾಯುಕ್ತ ಆನಂದ್ ಸಿ ಕಲ್ಲೋಲಿಕರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ ರಾಜ್, ಕಂದಾಯ ಅಧಿಕಾರಿಗ ಧನಂಜಯ್ ಮತ್ತು ನಗರಸಭೆಯ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply