ಉಡುಪಿ: ನಗರಸಭಾ ವ್ಯಾಪ್ತಿಯ ಪೆರಂಪಳ್ಳಿ ವಾರ್ಡಿನ ಪೆರಂಪಳ್ಳಿ ಸಮೀಪ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನ ಸ್ವರ್ಣ ನದಿ ತೀರದಲ್ಲಿ ಪುರಾಣ ಪ್ರಸಿದ್ಧ ಕೃಷ್ಣಾಂಗಾರಕ ಸ್ನಾನ ಘಟ್ಟ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣವಾಗುತ್ತಿದೆ. ಇಂದು ಶಾಸಕ ಕೆ. ರಘುಪತಿ ಭಟ್ ರವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಶಾಸಕರು ಯೋಜನಾ ನೀಲನಕಾಶೆಯನ್ನು ಪರಿಶೀಲಿಸಿ ಕೂಡಲೇ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.ನಗರಸಭೆಯ ನಾಮ ನಿರ್ದೇಶಿತ ಸದಸ್ಯ ಅರುಣಾ ಪೂಜಾರಿ, ನಗರ ಆಶ್ರಯ ಸಮಿತಿ ಸದಸ್ಯ ಡೆನ್ನಿಸ್ ಪೆರಂಪಳ್ಳಿ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶೇಷ ಕೃಷ್ಣ, ಸಹಾಯಕ ಅಭಿಯಂತರ ಹರೀಶ್ ಶೆಟ್ಟಿ, ವಾಸ್ತು ಶಿಲ್ಪಿ ಭಗವಾನ್ ದಾಸ್, ಗುತ್ತಿಗೆದಾರ ರಾಜೇಶ್ ಕಾರಂತ್, ಶಿವಪ್ರಸಾದ್ ಹೆಗ್ಡೆ , ಸ್ಥಳೀಯರಾದ ಹರಿಕೃಷ್ಣ ಶಿವತ್ತಾಯ, ವಾಸುದೇವ ಭಟ್, ಶಶಾಂಕ್ ಶಿವತ್ತಾಯ, ಮೊದಲಾದವರು ಉಪಸ್ಥಿತರಿದ್ದರು.