ಕುಂದಾಪುರ: ಸೌಕೂರು ಶ್ರೀ ಶಿವಶಂಕರಿ ದೇವಾಲಯದಲ್ಲಿ ಶಿವರಾತ್ರಿಯ ಆಚರಣೆ ನಡೆಯಿತು. ಜಾನಪದ ಗಾಯಕ ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಶ್ರೀ ಗಣೇಶ್ ಗಂಗೊಳ್ಳಿಯನ್ನು ದೇವಾಲಯದ ವತಿಯಿಂದ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ಅವರು ಸನ್ಮಾನಿಸಿದರು
ಉಡುಪಿ ಜಿಲ್ಲಾಪಂಚಾಯತ್ ಅಧ್ಯಕ್ಷ ಶ್ರೀ ದಿನಕರ್ ಬಾಬು, ಕಚ್ಚೂರೂ ಶ್ರೀ ಮಾಲತಿ ದೇವಿ ಬಬ್ಬು ಸ್ವಾಮಿ ದೇವಸ್ಥಾನದ ಅಧ್ಯಕ್ಷ ಗೋಕುಲ ದಾಸ್, ವಕೀಲ ಶರತ್ ಕುಮಾರ್ ಶೆಟ್ಟಿ, ಗುಲ್ವಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀಶ್ ಕುಮಾರ್ ಶೆಟ್ಟಿ, ದೇವಾಲಯದ ಅಧ್ಯಕ್ಷ ಎಸ್ ಜಿ ಗಣೇಶ್, ಬಾಡ ಬೆಟ್ಟು ಶ್ರೀ ಶನೀಶ್ವರ ದೇವಾಲಯದ ಧರ್ಮದರ್ಶಿ ಜಯರಾಮ ಹಾಗೂ ಎಸ್ ಎಂ ಶಂಕರ್ ಮುಖ್ಯ ಶಿಕ್ಷಕರು ಗುಲ್ವಾಡಿ, ಗೋಪಾಲ್ ಕಳಿಂಜೆ ಉಪಸ್ಥಿತರಿದ್ದರು.