ಜಿಯೋದಿಂದ ಹಳ್ಳಿ ಹಳ್ಳಿಗೂ ವೇಗದ ನೆಟ್ವರ್ಕ್ – ಸುಧೀಂದ್ರ

ಉಡುಪಿ: ದೇಶದಾದ್ಯಂತ ಹಳ್ಳಿ ಹಳ್ಳಿಗೂ ವೇಗದ ನೆಟ್ವರ್ಕ್ ಸಿಗಬೇಕು ಎನ್ನುವ ಉದ್ದೇಶದಿಂದ, ರಿಲಯನ್ಸ್ ಜೀಯೋ ಇನ್ಪೋ ಕಮ್ ಲಿಮಿಟೆಡ್ ಮೆಘಾ ಎನ್ಎನ್‌ಡಿ ಪ್ರಾಜೆಕ್ಟ್ ತಂದಿದ್ದು, ಈ ಯೋಜನೆಯ ಭಾಗವಾಗಿ ಉಡುಪಿ ಬಸ್ರೂರಿನಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.

ಡಿಜಿಟಲ್ ಇಂಡಿಯಾ ಪೂರಕವಾಗಿ, ವೇಗದ 5ಜಿ ನೆಟ್ವರ್ಕ್ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಈ ಯೋಜನೆ ಹೊರತಂದಿದ್ದು, ಬಸ್ರೂರಿನಲ್ಲಿ ಯೋಜನೆಯ ಭೂಮಿ ಪೂಜೆ ನಡೆಸಿ, ಜೀಯೋ ಇನ್ಪೋ ಕಮ್ ಲಿಮಿಟೆಡ್ ಸ್ಟೇಟ್ ಕಸ್ಟಮೈಜ್ ಹೆಡ್ ಸುದೀಂದ್ರ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೇಶದ ಪ್ರತಿಯೊಂದು ಕಡೆಗೂ ವೇಗದ ಸಿಗಬೇಕು ಎನ್ನುವುದು ಈ ಯೋಜನೆ ಉದ್ದೇಶವಾಗಿದ್ದು, ಯೋಜನೆಯಿಂದ ನೆಟ್ವರ್ಕ್ ಸಮಸ್ಯೆ ನಿವಾರಣೆಯಾಗಲಿದೆ. ಇದರಿಂದ ಹಳ್ಳಿಯಲ್ಲಿ ವರ್ಕ್ ಪ್ರಮ್ ಹೋಮ್ ಕೆಲಸ ಮಾಡುವವರಿಗೂ ಉಪಯೋಗವಾಗಲಿದೆ. ಅಲ್ಲದೇ ಲಕ್ಷಾಂತರ ಜನ ಸೇರಿದಾಗಲೂ ಯಾವುದೇ ನೆಟ್ವರ್ಕ್ ಸಮಸ್ಯೆ ಉಂಟಾಗುದಿಲ್ಲ ಅಂತ ಹೇಳಿದ್ದರು.

ಕಾರ್ಯಕ್ರಮದಲ್ಲಿ, ಸ್ಟೇಟ್ ಕಮರ್ಷಿಯಲ್ ಹೆಡ್ ವಿಷ್ಣು ದಾಸ್ , ಸ್ಟೇಟ್ ಪ್ರಾಜೆಕ್ಟ್ ಹೆಡ್ ಮಹೇಶ್, ಸ್ಟೇಟ್ ರಾ&ಓ ಹೆಡ್ ವಿರೇಂದ್ರ ಬಾಬು, ಉದ್ಭವ್ ಇನ್ಫ್ರಾಸ್ಟ್ಟಕ್ಚರ್ ನ ಶ್ರೀಶಾ ನಾಯಕ್ ಪೆರ್ಣಂಕಿಲ, ಎರಿಯಾ ಮ್ಯಾನೇಜರ್ ರಿಲಯನ್ಸ್ ಜೀಯೋ ಇನ್ಪೋ ಕಮ್‌ನ ಕಿರಣ್ ನಾಯಕ್, ಬಸ್ರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿನಕರ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುವರ್ಧನ್ ನಾಯಕ ನಿರೂಪಿಸಿ ವಂದಿಸಿದ್ದರು.

 
 
 
 
 
 
 
 
 
 
 

Leave a Reply