ಸಂಸ್ಕೃತ ಕಾಲೇಜಿನಲ್ಲಿ ಗ್ರಂಥಪಾಲಕರಾಗಿರಿದ್ದ ಹರಿಕೃಷ್ಣ ರಾವ್ ಎ. ಸಗ್ರಿ ನಿವೃತ್ತಿ

ಉಡುಪಿ: ಸಂಸ್ಕೃತ ಕಾಲೇಜಿನಲ್ಲಿ 1984ರಿಂದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಹರಿಕೃಷ್ಣ ರಾವ್ ಎ. ಸಗ್ರಿ ಅವರು ಜೂನ್ 31 ರಂದು ನಿವೃತ್ತರಾಗಿದ್ದಾರೆ.ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯತೆಯಿಂದ ಶಾಸ್ತ್ರದ ಜೊತೆಗೆ ಕನ್ನಡ, ಇಂಗ್ಲಿಷ್, ಮತ್ತು ಇತರ ವಿಷಯಗಳು ಹೊಸ ಕಲಿಕಾ ಪದ್ದತಿಯಲ್ಲಿ ಸೇರಿತು.

ಗ್ರಂಥಾಲಯದ ನಿರ್ವಹಣೆಯೊಂದಿಗೆ ಕನ್ನಡ, ಇಂಗ್ಲಿಷ್, ಪರಿಸರ ಅಧ್ಯಯನ ಮತ್ತು ಇತಿಹಾಸದ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಅಲ್ಲದೇ ಪ್ರಾರಂಭದ ಎನ್.ಎಸ್.ಎಸ್ ಘಟಕದ ಸಂಯೋಜನಾಧಿಕಾರಿಯಾಗಿ ಸಂಸ್ಕೃತ ಕಾಲೇಜಿನಲ್ಲಿ ಮುನ್ನಡಿಸಿ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪ್ರಶಸ್ತಿ ಪಡೆದಿದ್ದರು.

ಅವಧೂತ ನಿತ್ಯಾನಂದರ ಭಕ್ತರಾಗಿರುವ ಹರಿಕೃಷ್ಣ ರಾವ್ ಸಗ್ರಿ , ಉಡುಪಿಯ ನಿತ್ಯಾನಂದ ಮಂದಿರ ಮಠದ ಆಡಳಿತ ಮಂಡಳಿಯ ಸದಸ್ಯರಾಗಿದ್ದು,ಸತ್ಸಂಗದಲ್ಲಿ ಪ್ರವಚನಗಳಲ್ಲಿ ಭಾಗಿಯಾಗಿದ್ದರು.ಸಾಹಿತಿಯಾಗಿರುವ ಅವರು, ಕನ್ನಡ ನಿಯತಕಾಲಿಕ ಪತ್ರಿಕೆಗಳಲ್ಲಿ ಅಂಕಣ ಬರಹಗಳನ್ನು ಬರೆದಿದ್ದಾರೆ.ಹಲವಾರು ಪುಸ್ತಕಗಳು ಇವರ ಲೇಖನಿಯಿಂದ ಮೂಡಿಬಂದಿವೆ.

ಆಂಗ್ಲ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಮುಂದೆಯೂ ಹೊಸ ಕೃತಿಗಳು ರಚನೆಗೊಳ್ಳಲಿ ಎಂದು ತಾರಾನಾಥ್ ಮೇಸ್ತ ಶಿರೂರು ಆಶಿಸಿದ್ದಾರೆ.

 
 
 
 
 
 
 
 
 
 
 

Leave a Reply