ಉಡುಪಿ: ಕಳೆದ 30 ವರ್ಷಗಳಿಂದ ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುತೋನ್ಸೆಯಲ್ಲಿ ವಾಸವಿದ್ದ ಶಂಶಾದ್ ಬಾನು ಕೋಂ ಅಬ್ದುಲ್ ಸಮದ್ ಅವರ 94/CC ಅಡಿಯಲ್ಲಿ ಭಾಕಿಯಿದ್ದ ಖಾಯಂ ನಿವೇಶನ ಹಕ್ಕುಪತ್ರವನ್ನು ಇಂದು ಶಾಸಕ ಕೆ ರಘುಪತಿ ಭಟ್ ರವರು ಫಲಾನುಭವಿಯವರಿಗೆ ವಿತರಿಸಿದರು.
ಗಣಪತಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ, ಕೆಮ್ಮಣ್ಣು ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ್, ಪುರಂದರ್, ಮಾಜಿ ಸದಸ್ಯೆ ಮಾಲತಿ, ವೆಂಕಟೇಶ್ ಕುಂದರ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಗಿರೀಶ್ ಉಪಸ್ಥಿತರಿದ್ದರು.