‘ಜನಾಗ್ರಹ’ ಸಂವಾದ ಕಾರ್ಯಕ್ರಮ

ತಳಮಟ್ಟದಲ್ಲಿ ಜನರ ಸಹಭಾಗಿತ್ವವಿಲ್ಲದೆ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ ಎಂದು ಜನಾಗ್ರಹದ ನಾಗರಿಕ ಸಹಭಾಗಿತ್ವದ ಮುಖ್ಯಸ್ಥೆ ಸಪ್ನಾ ಕರೀಂ ಅಭಿಪ್ರಾಯಪಟ್ಟರು.
ಅವರು ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಮಾಹೆ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. "ವಿಕೇಂದ್ರೀಕರಣವು ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯವಾಗಿದ್ದು ಅದು ವಾಸ್ತವದಲ್ಲಿ ಕಾರ್ಯರೂಪಕ್ಕೆ ಬರಬೇಕಾಗಿದೆ" ಎಂದು ಅವರು ಹೇಳಿದರು.
ಸರ್ಕಾರವು ಪರಿಹರಿಸಲೇಬೇಕಾಗದ ಸಾಕಷ್ಟು ನಾಗರಿಕ ಸಮಸ್ಯೆಗಳಿವೆ; ಜನರು ಒತ್ತಡ ಹೇರದ ಮತ್ತು ಸ್ಥಳೀಯ ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸದ ಹೊರತು ಪ್ರಜಾಪ್ರಭುತ್ವವು ಸಂಪೂರ್ಣ ಮತ್ತು ಅರ್ಥಪೂರ್ಣವಾಗುವುದಿಲ್ಲ ಎಂದು
ಸಪ್ನಾ ಕರೀಂ ಹೇಳಿದರು.

ಮಹಾತ್ಮ ಗಾಂಧಿಯವರ ಮೌಲ್ಯಗಳಿಂದ ಪ್ರೇರಿತರಾದ ಸರ್ಕಾರೇತರ ಸಂಸ್ಥೆಯಾಗಿರುವ ಜನಾಗ್ರಹ ಸಂಘಟನೆಯ ವಿವಿಧ ಕಾರ್ಯಗಳ ಕುರಿತು ಅವರು ವಿವರಿಸಿದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಸಂವಾದವನ್ನು ನಡೆಸಿಕೊಟ್ಟರು. ಗೌತಮಿ ಕಾಕತ್ಕರ್ ಸ್ವಾಗತಿಸಿದರು.

 
 
 
 
 
 
 
 
 
 
 

Leave a Reply