ಉಡುಪಿ : ಬೈಂದೂರು ತಾಲೂಕು ಗೋಳಿಹೊಳೆ ಗ್ರಾಮದಲ್ಲಿ ಗೋಮಾಳ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿರುವುದು ಅತ್ಯಂತ ಖಂಡನೀಯ.
ರಾಜ್ಯ ಸರ್ಕಾರ ಮತ್ತು ಉಡುಪಿ ಜಿಲ್ಲಾಡಳಿತ ತಕ್ಷಣ ಅತಿಕ್ರಮಣಕಾರರನ್ನು ಬಂಧಿಸಿ, ಗೋಮಾಳ ಭೂಮಿಯಲ್ಲಿ ನಿರ್ಮಿಸಲಾದ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಿ ಮರು ಸ್ವಾಧೀನ ಪಡಿಸಿಕೊಳ್ಳಬೇಕು. ಗೋಮಾಳ ಭೂಮಿಗಳನ್ನು ಲೂಟಿಮಾಡುವವರ ವಿರುದ್ಧ ಉಗ್ರ ಶಿಕ್ಷೆಯ ಸಂದೇಶವನ್ನು ರಾಜ್ಯಾದ್ಯಂತ ಸರ್ಕಾರ ರವಾನಿಸಬೇಕು.
ಈಗಾಗಲೇ ಗೋಳಿಹೊಳೆಯ ಪ್ರಕರಣದಲ್ಲಿ ಬೈಂದೂರ್ ತಹಶೀಲ್ದಾರ್ ನೀಡಿರುವ ಭರವಸೆ ಸ್ವಾಗತಾರ್ಹ . ಆದರೆ ಇದು ಕೇವಲ ಮಾತಾಗಬಾರದು.ಇದನ್ನು ಕೂಡಲೇ ಅನುಷ್ಠಾನಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದು ಉಡುಪಿಯ ಸಾಮಾಜಿಕ ಕಾರ್ಯಕರ್ತ ಜಿ ವಾಸುದೇವ ಭಟ್ ಪೆರಂಪಳ್ಳಿ ಹೇಳಿದ್ದಾರೆ.