ಆಸರೆ ಚಾರಿಟೇಬಲ್ ಟ್ರಸ್ಟ್ ನಿಂದ 73 ನೇ ಮನೆಗೆ ಉಚಿತ ವಿದ್ಯುತ್ ಸಂಪರ್ಕ

ಉಡುಪಿ: ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ(ರಿ) ಕಡಿಯಾಳಿ ಇದರ ಸಾಮಾಜಿಕ ಮತ್ತು ಸೇವಾ ಪ್ರಕಲ್ಪ ಆಸರೆ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಉಡುಪಿ ನಗರದ ಮೂಡಬೆಟ್ಟು ವಾರ್ಡಿನ ದಲಿತ ಸಮುದಾಯದ ಶ್ರೀಮತಿ ಕಸ್ತೂರಿ ಮತ್ತು ಸಂಜೀವ ದಂಪತಿಯ ಮನೆಗೆ ಉಚಿತ ವಿದ್ಯುತ್ ಸಂಪರ್ಕ ನೀಡುವುದರ ಮೂಲಕ 73 ನೇ ಮನೆಗೆ ವಿದ್ಯುತ್ ಸಂಪರ್ಕ ನೀಡಲಾಯಿತು.

ಈ ಮನೆಯ ಉಚಿತ ವಿದ್ಯುತ್ ಸಂಪರ್ಕ ಸಂಪೂರ್ಣ ವೆಚ್ಚವನ್ನು ಜ್ಯೋತಿ ಎಸ್. ತಂತ್ರಿ ನೀಡಿದರು. ಮೂಡಬೆಟ್ಟು ವಾರ್ಡಿನ ನಗರಸಭಾ ಸದಸ್ಯ ಶ್ರೀಶ ಕೊಡವೂರು, ಶಂಕರ ಪೂಜಾರಿ ಮಧ್ವ ನಗರ, ನಿತ್ಯಾನಂದ ಶೆಟ್ಟಿ ಕಂಗಣಬೆಟ್ಟು, ಶೇಖರ್ ಅಮಿನ್ ಚನ್ನದಂಗಡಿ, ಜಗದೀಶ್ ಅಮೀನ್, ಉಪಸ್ಥಿತರಿದ್ದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿ, ನಗರಸಭೆಯ ಮಾಜಿ ಸದಸ್ಯ ಸುರೇಶ್ ಶೆಟ್ಟಿ ಸ್ವಾಗತಿಸಿ ಕಡಿಯಾಳಿ ಗಣೇಶೋತ್ಸವ ಸಮಿತಿಯ ರಾಕೇಶ್ ಜೋಗಿ ವಂದಿಸಿದರು. ಈ ಮನೆಯ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕನ್ನರ್ಪಾಡಿ ಸೋನಿ ಎಲೆಕ್ಟ್ರಿಕಲ್ಸ್ ನ ಜನಾರ್ಧನ್ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply