2021-22 ನೆ ಸಾಲಿನ ಬಡ್ಜೆಟ್ ನಲ್ಲಿ ಘೋಷಿಸಿದ ಕರ ರಹಿತ ಡೀಸೆಲ್ ಡೆಲಿವರಿ ಪಾಯಿಂಟ್ ನಲ್ಲಿ ವಿತರಿಸುವ ಹಲವಾರು ವರ್ಷದ ಕರ್ನಾಟಕ ಕರಾವಳಿಯ ಮೀನುಗಾರರ ಬೇಡಿಕೆಯನ್ನು ಈಡೇರಿಸಿದ ಕರ್ನಾಟಕದ ಮುಖ್ಯ ಮಂತ್ರಿ ಬಿ. ಎಸ್ ಯಡಿಯೂರಪ್ಪರನ್ನು ಸಮಸ್ತ ಕರ್ನಾಟಕ ಕರಾವಳಿಯ ಮೀನುಗಾರರ ಪರವಾಗಿ ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ವತಿಯಿಂದ ಅಭಿನಂದಿಸಲಾಯಿತು.
ಮೊಗವೀರ ಮುಖಂಡ ನಾಡೋಜ ಜಿ. ಶಂಕರ್, ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟಿಯನ್ , ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ಕಿಶೋರ್ ಡಿ. ಸುವರ್ಣ ವಿನಯ್ ಕರ್ಕೇರ ಮೊದಲಾದವರು ಉಪಸ್ಥತರಿದ್ದರು