ಉಡುಪಿ : ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಜಿಲ್ಲೆ ಹಾಗೂ ಸುವರ್ಣ ಎಂಟರ್ ಪ್ರೈಸಸ್ ಬ್ರಹ್ಮಾವರದ ವತಿಯಿಂದ ಕರೋನಾ ಸೋಂಕಿತರಿಗೆ ನೆರವಾಗುವ ದೃಷ್ಟಿಯಿಂದ ಜಿಲ್ಲಾಡಳಿತಕ್ಕೆ ಸುಮಾರು 50 ಸಾವಿರ ಮೌಲ್ಯದ ಪ್ರೋಟೀನ್ ಪೌಡರ್, ಪಿಪಿಇ ಕಿಟ್ ಮಾಸ್ಕ್ ಗಳನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ಗೆ ಹಸ್ತಾಂತರಿಸಲಾಯಿತು.
ಸಹಾಯಕ ಔಷಧ ನಿಯಂತ್ರಕ ನಾಗರಾಜ್, ಸುವರ್ಣ ಎಂಟರ್ ಪೈಸಸ್ ನ ಮಧುಸೂಧನ್ ಹೇರೂರು, ಸುನೀತಾ ಮಧುಸೂಧನ್, ವೈದ್ಯಕೀಯ ಪ್ರತಿನಿಧಿಗಳ ಸಂಘದ ಪ್ರ.ಕಾರ್ಯದರ್ಶಿ ಪ್ರಸನ್ನ ಕಾರಂತ್, ಪದಾಧಿಕಾರಿಗಳಾದ ಪ್ರಕಾಶ್ ಆಚಾಯ೯, ಶ್ರೀನಾಥ್ ಕೋಟ, ಅನಂತ್ ಹೊಳ್ಳ, ದೇವೇಂದ್ರ ಶ್ರೀಯಾನ್, ಚೇತನ್ ಪುತ್ರನ್, ಚಂದ್ರಶೇಖರ್ ಆಚಾರ್, ಸುಧೀರ್ ಶೇಟ್ ರಾಘವೇಂದ್ರ ಪ್ರಭು,ಕರ್ವಾಲು ಮುಂತಾದವರಿದ್ದರು.