ನಾಗರಾಜ್ ಹೆಬ್ಬಾರ್ ಅವರ ಪ್ರವಾಸ ಕಥನ ‘ಚಾರಧಾಮ್ ಯಾತ್ರಾ’ ಕೃತಿ ಬಿಡುಗಡೆ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಇದರ ಆಶ್ರಯದಲ್ಲಿ ಜುಲೈ 12 ಮಂಗಳವಾರದಂದು ಮರವಂತೆ ನಾಗರಾಜ್ ಹೆಬ್ಬಾರ್ ಅವರ ಪ್ರವಾಸ ಕಥನ ‘ಚಾರಧಾಮ್ ಯಾತ್ರಾ’ ಕೃತಿಯನ್ನು
ಉಡುಪಿಯ ಮಣಿಪಾಲ್ ಇನ್ ಹೋಟೆಲ್ ನ ಸಿಂಡ್ರೆಲಾ ಸಭಾಂಗಣದಲ್ಲಿ ಮಣಿಪಾಲ
ಕೆ ಎಂ ಸಿಯ ಪ್ರೊಫೆಸರ್ ಡಾ. ಕಿರಣ್ ಆಚಾರ್ಯ ಅವರು ಬಿಡುಗಡೆ ಮಾಡಿದರು.

ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ ನಮ್ಮಮನಸ್ಸಿಗೆ ನೆಮ್ಮದಿ ಸಿಗುತ್ತದೆ , ನಾಗರಾಜ್ ಹೆಬ್ಬಾರರು ಈ ಪ್ರವಾಸ ಕಥನವನ್ನು ಹೊರತಂದಿದ್ದು, ಮುಂದೆಯೂ ಇಂತಹ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಕಥೆಗಳನ್ನು ಚಿಕ್ಕ ಪುಸ್ತಕರೂಪದಲ್ಲಿ ಹೊರ ತಂದು ಪ್ರವಾಸಿ ತಾಣಗಳ ಪರಿಚಯವನ್ನು ಪ್ರವಾಸಿಗರಿಗೆ ಮಾಡಿಕೊಡಬೇಕೆಂದು ತಿಳಿಸಿದರು.

ಸಭಾ ಕಾರ್ಯಕ್ರಮದಲ್ಲಿ ಕೃತಿ ಪರಿಚಯವನ್ನು ನಿವೃತ್ತ ಪ್ರಾಧ್ಯಾಪಕ ಪ್ರೊಫೆಸರ್ ಲಕ್ಷ್ಮೀನಾರಾಯಣ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ,ಕರಾವಳಿ ಪ್ರವಾಸ ಉದ್ಯಮ ಸಂಘಟನೆಯ ಮನೋಹರ್ ಎಸ್ ಶೆಟ್ಟಿ ,ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಉಡುಪಿ ವಿಶ್ವನಾಥ ಶೆಣಿೈ,ಅಧ್ಯಕ್ಷರಾದ ಪ್ರೊಫೆಸರ್ ಶಂಕರ್ , ಉಡುಪಿ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿರಾಜ್ ಎಚ್.ಪಿ ಉಪಸ್ಥಿತರಿದ್ದರು ಕಲಾವಿದ ರಾಜೇಶ್ ಭಟ್ ಪಣಿಯಾಡಿ ನಿರೂಪಿಸಿ , ರಾಘವೇಂದ್ರ ಪ್ರಭು ಕರ್ವಾಲು ಧನ್ಯವಾದ ನೀಡಿದರು.

 
 
 
 
 
 
 
 
 
 
 

Leave a Reply