ಬಿಜೆಪಿ ಕಾಪು ಮಂಡಲದ ರೈತ ಮೋರ್ಚ ವತಿಯಿಂದ ಬತ್ತದ ನಾಟಿಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಬಿಜೆಪಿ ಕಾಪು ಮಂಡಲದ ರೈತ ಮೋರ್ಚ ವತಿಯಿಂದ ಇಂದು ಹಿರೆಬೆಟ್ಟುವಿನಲ್ಲಿ ಕೇಂದ್ರ ಸರಕಾರದ ರೈತ ಕಲ್ಯಾಣ ಯೋಜನೆಗಳ ಕರಪತ್ರ ಬಿಡುಗಡೆ ಹಾಗೂ ಬತ್ತದ ನಾಟಿಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಕಾಪು ಮಂಡಲ ರೈತಮೋರ್ಚ ಅಧ್ಯಕ್ಷರಾದ ಗುರುನಂದನ್ ನಾಯಕ್, ಕಾಪು‌ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ರಾಜ್ಯ ಸಾವಯವ ಕ್ರಷಿ ನಿಗಮದ ನಿರ್ದೇಶಕರಾದ ರಾಘವೇಂದ್ರ ಉಪ್ಪೂರು, ಜಿಲ್ಲ ರೈತಮೋರ್ಚ ಪ್ರಧಾನ ಕಾರ್ಯದರ್ಶಿ ಧೀರಜ್ ಶೆಟ್ಟಿ, ಪ್ರವೀಣ್ ಶೆಟ್ಟಿ ಇನ್ನಂಜೆ, ಪದ್ಮನಾಭ ಹೆಗ್ಡೆ, ಶ್ರೀಕಾಂತ ಕಾಮತ್, ಪ್ರಕಾಶ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಪಟ್ಲ ಶಾಲಾ ಮಕ್ಕಳಿಂದ ಬತ್ತ ನೆಡುವ ಕಾರ್ಯಕ್ರಮ‌ ನಡೆಯಿತು.

 
 
 
 
 
 
 
 
 
 
 

Leave a Reply