ಬ್ರಹ್ಮಾವರದಲ್ಲಿ ಶಂಕರಜಯಂತಿ ಮಹೋತ್ಸವ

ದಿನಾಂಕ ಮೇ 1, ಭಾನುವಾರದಂದು  ಶ್ರೀ ದುರ್ಗಾದೇವಿ ಮಹಾಕಾಳೀ ದೇವಸ್ಥಾನ ( ರಿ) ಕೋಡಿ ಬೇಂಗ್ರೆ ಇಲ್ಲಿ ಶ್ರೀ ಶಂಕರತತ್ವ ಪ್ರಸಾರ ಅಭಿಯಾನ ಸಮಿತಿ ಬ್ರಹ್ಮಾವರ ತಾಲೂಕು ಇವರ ಪ್ರಾಯೋಜಕತ್ವದಲ್ಲಿ “ಶಂಕರಜಯಂತಿ ಮಹೋತ್ಸವ “ವು ಜರುಗಲಿದೆ.
 
ಬೆಳಗ್ಗೆ ಗಂಟೆ ೧೧.ಕ್ಕೆ ಪ್ರಾರಂಭವಾಗುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಿ. ರವೀಂದ್ರ ಹೆಬ್ಬಾರ್, ಸಂಚಾಲಕರು ಶ್ರೀ ಶಂಕರತತ್ವ ಪ್ರಸಾರ ಅಭಿಯಾನ ಸಮಿತಿ ವಹಿಸಲಿದ್ದು, ಶ್ರೀ ಅರವಿಂದ ಶರ್ಮ ಉಪನ್ಯಾಸ ನೀಡಲಿದ್ದಾರೆ.
ಆಸಕ್ತ ಮಹನೀಯರು ಭಾಗವಹಿಸಿ ಶ್ರೀ ಶಂಕರ ಭಗವತ್ಪಾದರ ಕೃಪೆಗೆ ಪಾತ್ರರಾಗಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
 
 
 
 
 
 
 
 
 
 
 

Leave a Reply