ಶ್ರೀ ವಿದ್ಯೇಶ ವಿದ್ಯಾ ಮಾನ್ಯ ನೇಷನಲ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಶ್ರೀ ವಿದ್ಯೇಶ ವಿದ್ಯಾ ಮಾನ್ಯ ನೇಷನಲ್ ಆಂಗ್ಲಮಾಧ್ಯಮ ಶಾಲೆ ಹೇರಾಡಿ ಬಾರ್ಕೂರ ನಲ್ಲಿ 75ನೇ ಯ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಧ್ವಜಾರೋಹಣ ಕಾರ್ಯಕ್ರಮವನ್ನು ಬಾರ್ಕೂರು ವಿದ್ಯಾಭಿವೃದ್ಧಿ ಸಂಘ ಸದಸ್ಯ ರಾದ ಶ್ರೀ ವಿಶ್ವ ನಾಥ್ ಶೆಟ್ಟಿ . ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾಗಿರುವ Dr B. M ಸೋಮಯಾಜಿ, ಶಾಲಾ ಮುಖ್ಯಸ್ಥ ರಾದ ಶ್ರೀ ಮತಿ ಪ್ರೀತಿ ರೇಖಾ,ಶಾಲಾ ಮುಖಂಡ ಸಮರ್ಥ್, ಶಾಲೆಯ ಎಲ್ಲಾ ಶಿಕ್ಷಕ, ಶಿಕ್ಷಕೇತರರು , ಪೋಷಕರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು,,ಶಾಲಾ ವಿದ್ಯಾರ್ಥಿ ಗಳು ಸ್ವಾತಂತ್ರ್ಯ ಹೋರಾಟಗಾರರ ಉಡುಪನ್ನು ಧರಿಸಿ ಕಾರ್ಯಕ್ರಮ ವನ್ನು ಮೆರಗು ಗೊಳಿಸಿದರು, ಈ ಕಾರ್ಯಕ್ರಮ ವನ್ನು ಅವನಿ ನಿರೂಪಿಸಿ, ಸ್ಪೂರ್ತಿ ಶೆಟ್ಟಿ ಸ್ವಾಗತಿಸಿ, ಸ್ಪೂರ್ತಿ ಕೆ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು, ಪ್ರಾರ್ಥನಾ ಧನ್ಯವಾದ ಕಾರ್ಯಕ್ರಮ ನೆರೆವೇರಿಸಿ ಕೊಟ್ಟರು, ಶಾಲಾ ವಿದ್ಯಾರ್ಥಿ ಗಳಿಗೆ ಕೆನರಾ ಬ್ಯಾಂಕ್ ನ ಸೀನಿಯರ್ ಮ್ಯಾನೇಜರ್ ಆಗಿರುವ ವಜ್ರೇಶ್ವರಿ ರವರು ಮತ್ತು B.K.ಕೊಠಾರಿ ರವರು ಸಿಹಿತಿಂಡಿ ಕೊಡುಗೆ ಯನ್ನು ನೀಡಿದರು. ಈ ಕಾರ್ಯಕ್ರಮ ವನ್ನು ಶಿಕ್ಷಕಿ ಶ್ರೀಮತಿ ಜ್ಯೋತಿ ಶೆಟ್ಟಿ, ಶ್ರೀಮತಿ ರಾಧಿಕಾ, ಶ್ರೀಮತಿ ಜ್ಯೋತಿ ಸಂಯೋಜನೆ ಮಾಡಿದರು.

 
 
 
 
 
 
 
 
 
 
 

Leave a Reply