ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ರಿ ಆದಿಉಡುಪಿ 75ನೇ ಸ್ವಾತಂತ್ರ್ಯೋತ್ಸವ

ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ರಿ ಆದಿಉಡುಪಿ 75ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಸಮಾರಂಭವು ಬೆಳಿಗ್ಗೆ ಗಂಟೆ 8.30 ಕ್ಕೆ ಸರಿಯಾಗಿ ಬೈದಶಿಯಲ್ಲಿ ಜರಗಿತು. ಧ್ವಜಾರೋಹಣವನ್ನು ಕೆನರಾ ಬ್ಯಾಂಕ್ ನ ಪ್ರಬಂಧಕರಾದ ಶ್ರೀಮತಿ ಅಶ್ವಿನಿ ಅವರು ಮಾಡಿದರು. ಚಲನಚಿತ್ರ ನಟ ಸೂರ್ಯೋದಯ ಪೆರಂಪಳ್ಳಿ ಅವರು ಸ್ವಾತಂತ್ರ್ಯದ ಬಗ್ಗೆ ಮಾತನಾಡಿದರು .ಅಧ್ಯಕ್ಷತೆಯನ್ನು ಅಧ್ಯಕ್ಷರಾದ ದಾಮೋದರ್ ಕಲ್ಮಾಡಿ ವಹಿಸಿದ್ದರು ಕಾರ್ಯದರ್ಶಿ ಮಹೇಶ್ ಕುಮಾರ್ ರವರು ಸ್ವಾಗತಿಸಿದರು. ಉಪಾಧ್ಯಕ್ಷರಾದ ಶೇಖರ್ ಮಾಸ್ಟರ್ ರವರು ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು. ಸಮಾರಂಭದಲ್ಲಿ ಹಿರಿಯರಾದ ತೇಜಪ್ಪ ಬಂಗೇರ, ಶೇಖರ್ ಪೂಜಾರಿ, ಚೆಲುವರಾಜ ಪೆರಂಪಳ್ಳಿ, ಗಂಗಾಧರ ಕಿದಿಯೂರು, ಸಂಜೀವ ಪೂಜಾರಿ, ಬಿಬಿ ಪೂಜಾರಿ, ಮಹೇಶ್ ಎನ್, ಹರೀಶ್ ಎಮ್ ಕೆ, ಉಪಸ್ಥಿತರಿದ್ದರು. ತದನಂತರ ಧನ್ಯವಾದದೊಂದಿಗೆ ಸಿಹಿ ತಿಂಡಿ ಹಂಚಲಾಯಿತು.

 
 
 
 
 
 
 
 
 
 
 

Leave a Reply